SYS , SSF ಕೆಮ್ಮಾಯಿ ವತಿಯಿಂದ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ

0

ಪುತ್ತೂರು: ಕೆಮ್ಮಾಯಿಯಿಂದ ಹಜ್ ಯಾತ್ರೆಗೆ ಹೊರಡಲಿರುವ ಪುತ್ತೂರು ಸ್ಟೈಲ್ ಪಾರ್ಕ್ ಮಾಲಕ ಶರೀಫ್ ಹಾಗೂ ಅವರ ಪತ್ನಿ ಮತ್ತು ಅಬ್ದುಲ್ ರಝಾಕ್ ಕೆಮ್ಮಾಯಿ ಹಾಗೂ ಅವರ ಧರ್ಮ ಪತ್ನಿ ಮತ್ತು ಮರ್ಹೂಮ್ ಉಮರ್ ಚ್ಚ ರವರ ಧರ್ಮ ಪತ್ನಿ ಹಬೀಬ ರವರಿಗೆ SYS ಮತ್ತು SSF ಕೆಮ್ಮಾಯಿಯ ವತಿಯಿಂದ ಕೆಮ್ಮಾಯಿ ಎಸ್‌ ವೈ ಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು SYS ಅಧ್ಯಕ್ಷ ರಹೀಮ್ ಕೆಮ್ಮಾಯಿ ವಹಿಸಿದರು. ಅರಮನೆ ಅಬ್ದುರ್ರಹ್ಮಾನ್ ಹಾಜಿ ಕೆಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಬಿ ಜೆ ಎಮ್ ಅಧ್ಯಕ್ಷ ಬಶೀರ್ ಹಾಜಿ ಅನಿಲಕೋಡಿ ಹಜ್ ಯಾತ್ರೆ ಕೈಗೊಂಡ ಸಮೂನ್ಚ ಮತ್ತು ರಝಾಕ್ ರವರಿಗೆ ಉಡುಗೊರೆ ನೀಡುವ ಮೂಲಕ ಸನ್ಮಾನಿಸಿದರು. ರಫೀಕ್ ಸಖಾಫಿ ಬಳ್ಳಾರಿ ದುವಾ ನೆರವೇರಿಸಿದರು.


ಮಹಿಳಾ ಹಜ್ ಯಾತ್ರೆ ಕೈ ಗೊಂಡವರನ್ನು ಮಹಿಳೆಯರ ಕಾರ್ಯಕ್ರಮದಲ್ಲಿ ಉೂರಿನ ಮಹಿಳೆಯರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ SYS ಕೆಮ್ಮಾಯಿ ಇದರ ಖಜಾಂಜಿ ಅಬ್ದುಲ್ ಅಝೀಝ್ CITY21, SYS ಪುತ್ತೂರಿನ ಸದಸ್ಯರಾದ ಅಬ್ದುಲ್ ಶಕೂರ್, SSF ಪುತ್ತೂರು ಸೆಕ್ಟರ್ ಪ್ರದಾನ ಕಾರ್ಯದರ್ಶಿಯಾದ ರಫೀಕ್ ಕೆಮ್ಮಾಯ್, ಹಾಗೂ ಊರಿನ ಹಿರಿಯ ಕಿರಿಯರು ಭಾಗವಹಿಸಿ ಪರಸ್ಪರ ದುಆ ವಸೀಯ್ಯತ್ ನೊಂದಿಗೆ ಬೀಳ್ಕೊಟ್ಟರು.

LEAVE A REPLY

Please enter your comment!
Please enter your name here