![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಕಂಪಾನಿಯೋ ಸಂಸ್ಥೆ ಪ್ರತೀ ವರ್ಷ ಕೊಡುವ ಬಾಹುಬಲಿ ಪ್ರಶಸ್ತಿಯನ್ನು ಈ ಸಲ ಪುತ್ತೂರು ನೆಮ್ಮದಿ ವೆಲ್ನೆಸ್ ಸೆಂಟರ್ ಮಾಲಕ ಪ್ರಭಾಕರ್ ಸಾಲಿಯಾನ್ ಬಾಕಿಲಗುತ್ತುವರಿಗೆ ನೀಡಿ ಗೌರವಿಸಲಾಗಿದೆ.
![](https://puttur.suddinews.com/wp-content/uploads/2024/05/8de7abbc-77a6-4414-8907-ae048fcf6664-1.jpg)
ಕೇವಲ 18 ತಿಂಗಳಲ್ಲಿ 45 ಶಿಬಿರಗಳನ್ನು ಏರ್ಪಡಿಸಿ ಸುಮಾರು 16000 ಜನರಿಗೆ 83000 ಉಚಿತ ಥೆರಪಿ ನೀಡಿ ಕಾಯಿಲೆಯನ್ನು ಔಷಧಿ ಇಲ್ಲದೆ ಗುಣಪಡಿಸುವ ಮೂಲಕ ಕಂಪನಿಯ ಇತಿಹಾಸದಲ್ಲಿ ಹೊಸ ದಾಖಲೆ ಮಾಡಿದ ಹಿನ್ನೆಲೆಯಲ್ಲಿ ಪ್ರಭಾಕರ ಸಾಲ್ಯಾನ್ ಅವರಿಗೆ ಮೇ 25ರಂದು ಬೆಂಗಳೂರಿನ ಗೋಲ್ಡನ್ ಮೆಟ್ರೋ ಹೋಟೆಲಿನಲ್ಲಿ ನಡೆದ ಸಮಾರಂಭದಲ್ಲಿ ಕಂಪಾನಿಯೋ ಕಂಪನಿಯ ಮುಖ್ಯ ಪ್ರವರ್ತಕರಾದ ರತ್ನಾಕರ್ ಶೆಟ್ಟಿ, ಸೀತಾರಾಮ ಶೆಟ್ಟಿ ಮತ್ತು ಲತಾ ಬಾಹುಬಲಿ ಪ್ರಶಸ್ತಿ ಪ್ರದಾನ ಮಾಡಿದರು.