![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ) ಪುತ್ತೂರು ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಪುತ್ತೂರಿನ ಬರೆಕರೆ ವೆಂಕಟರಮಣ ಸಭಾಭವನದಲ್ಲಿ ಭಾನುವಾರ ‘ನಾಯಕಾ- ನಾಯಿಕಾ ಭಾವ’ ಕುರಿತ ಒಂದು ದಿನದ ಕಾರ್ಯಗಾರ ಏರ್ಪಟ್ಟಿತು.
![](https://puttur.suddinews.com/wp-content/uploads/2024/05/20240526_093155.jpg)
ಸಂಪನ್ಮೂಲ ವ್ಯಕ್ತಿಗಳಾಗಿ ವಿದುಷಿ ಡಾ. ಸಹನಾ ಪ್ರದೀಪ್ ಭಟ್ ಹುಬ್ಬಳ್ಳಿ ಆಗಮಿಸಿದ್ದರು. ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಸ್ವಾಗತಿಸಿ, ನಿರೂಪಿಸಿದರು. ಶ್ರೀದೇವಿ ಕೋಟೆ ಪ್ರಾರ್ಥಿಸಿದರು. ಕಾರ್ಯಾಗಾರದಲ್ಲಿ ಪುತ್ತೂರು ಸಹಿತ ವಿವಿಧ ಕಡೆಗಳ ವಿದ್ಯಾರ್ಥಿಗಳು ಪಾಲ್ಗೊಂಡರು. ದಿನಪೂರ್ತಿ ನಡೆದ ಕಾರ್ಯಗಾರದಲ್ಲಿ ಡಾ.ಸಹನಾ ಪ್ರದೀಪ್ ಭಟ್ ಅವರು ‘ನಾಯಕಾ-ನಾಯಿಕಾ ಭಾವ’ ಕುರಿತು ಅಭಿನಯ, ಸಂವಾದ, ಪ್ರಶ್ನೋತ್ತರ ನಡೆಸಿಕೊಟ್ಟರು.
![](https://puttur.suddinews.com/wp-content/uploads/2024/05/20240526_093604.jpg)
![](https://puttur.suddinews.com/wp-content/uploads/2024/05/20240526_093511.jpg)