ಸವಣೂರು ಚಾಪಲ್ಲ ಮಕಾಷಿಫುಲ್ ಖುಲೂಬ್ ದರ್ಸ್ ಸ್ಟೂಡೆಂಟ್ಸ್ ಅಸೋಷಿಯೇಶನ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಸಯ್ಯಿದ್ ಮುಹಮ್ಮದ್ ಹಾದೀ ತಂಙಳ್ ಮೆಮೋರಿಯಲ್ ದರ್ಸ್ ಚಾಪಲ್ಲ ಸವಣೂರು ಇದರ ಸಾಹಿತ್ಯ ಸಮಾಜದ ಸಂಘಟನೆಯಾದ ಮಕಾಷಿಫುಲ್ ಖುಲೂಬ್ ದರ್ಸ್ ಸ್ಪೂಡೆಂಟ್ಸ್ ಅಸೋಸಿಯೇಶನ್ ಚಾಪಲ್ಲ ಸವಣೂರು ಇದರ2024-25ನೇ ಸಾಲಿನ ಮಹಾಸಭೆ ಅಶ್ರಫ್ ಫಾಝಿಲ್ ಬಾಖವಿಯವರ ನೇತೃತ್ವದಲ್ಲಿ ದರ್ಸ್ ಹಾಲ್‌ನಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಅಶ್ರಫ್ ಫಾಝಿಲ್ ಬಾಖವಿ, ಅಧ್ಯಕ್ಷರಾಗಿ ಮಸೂದ್ ಮೂಡಿಗೆರೆ, ಪ್ರಧಾನ ಕಾರ್ಯದರ್ಶಿಯಾಗಿ ಸ್ವಾದಿಕ್ ಕಾಜೂರು, ಕೋಶಾಧಿಕಾರಿಯಾಗಿ ಸಲ್ಮಾನ್ ಫಾರಿಸ್ ಪಣೆಮಜಲ್ ಸಂಘಟನಾ ಕಾರ್ಯದರ್ಶಿಯಾಗಿ ಹಾಫಿಲ್ ಶಿಹಾಬುದ್ದೀನ್ ಅಡೆಕ್ಕಲ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸಯ್ಯದ್ ಮುಯೀನುದ್ದೀನ್ ಸಾಲ್ಮರ, ಸಯ್ಯಿದ್ ಹಸನ್ ಸಾಲ್ಮರ, ಜೊತೆ ಕಾರ್ಯದರ್ಶಿಗಳಾಗಿ ಶುಹೈಬ್ ಪೆರ್ಲಂಪಾಡಿ, ಸಿನಾನ್ ಸವಣೂರು, ಸದಸ್ಯರಾಗಿ ರಹೀಸ್ ಸಾಲ್ಮರ, ಶಾಹಿದ್ ಸವಣೂರು, ಕದೀರ್ ಸವಣೂರು, ಜಮಾಲ್ ಸವಣೂರು, ಹಾಫಿಲ್ ಅಕ್ಮಲ್ ಸಜಿಪ, ಶಹೀರ್ ಸವಣೂರುರವರನ್ನು ಆಯ್ಕೆ ಮಾಡಲಾಯಿತು. ಸ್ವಾದಿಕ್ ಕಾಜೂರು ಸ್ವಾಗತಿಸಿದರು.

LEAVE A REPLY

Please enter your comment!
Please enter your name here