ಪುತ್ತೂರು ಅಂಚೆ ಇಲಾಖೆಯಿಂದ ಧರ್ಮಸ್ಥಳ, ಒಡಿಲ್ನಾಳದಲ್ಲಿ ಅಶಕ್ತರ ಮನೆ ಬಾಗಿಲಿಗೆ ಆಧಾರ್ ಸೇವೆ

0

ಪುತ್ತೂರು: ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ವತಿಯಿಂದ ಧರ್ಮಸ್ಥಳ ಹಾಗೂ ಒಡಿಲ್ನಾಳ ಅಂಚೆ ವ್ಯಾಪ್ತಿಯಲ್ಲಿ ಬರುವಂತಹ 6 ಅಶಕ್ತರ ಮನೆ ಬಾಗಿಲಿಗೆ ಹೋಗಿ ಆಧಾರ್ ಸೇವೆಯನ್ನು ನೀಡಲಾಯಿತು.


ಆಧಾರ್ ಅಪ್ಡೇಟ್ ಹಾಗು ಸೀಡಿಂಗ್ ಮಾಡದೆ ಇದ್ದ ಕಾರಣ ಸರ್ಕಾರದಿಂದ ಬರುತ್ತಿದ್ದ ಮಾಸಿಕ ವೇತನವು ಸ್ಥಗಿತವಾಗಿತ್ತು. ಅಂಚೆ ಸಿಬ್ಬಂದಿ ವರ್ಗ ಪುತ್ತೂರು ವಿಭಾಗದ ವತಿಯಿಂದ ಹಿರಿಯ ಜೀವಗಳ ಹಾಗೂ ಶಾಶ್ವತ ಅಂಗ ವೈಕಲ್ಯದಿಂದ ಬಳಲುತ್ತಿರುವ ಸುಮಾರು ಆರು ಮನೆಗಳಿಗೆ ತೆರಳಿ ತಡರಾತ್ರಿ 9 ಗಂಟೆಯ ವರೆಗೂ ಆಧಾರ್ ಅಪ್ಡೇಟ್ ಮಾಡಲಾಯಿತು. ವಿಭಾಗದ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಭಾಗವು ಇನ್ನಷ್ಟೂ ಅಶಕ್ತರಿಗೆ ಈ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿದೆ.

LEAVE A REPLY

Please enter your comment!
Please enter your name here