ಕೈಕಾರ:ಕತ್ತಿಯಿಂದ ಹಲ್ಲೆ- ಪ್ರಕರಣ ದಾಖಲು

0

ಪುತ್ತೂರು:ಒಳಮೊಗ್ರು ಗ್ರಾಮದ ಕೈಕಾರದಲ್ಲಿ ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಮೇ.28ರಂದು ನಡೆದ ಬಗ್ಗೆ ವರದಿಯಾಗಿದೆ.
ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ ಶುಭೋದಯ(37ವ)ರವರು ಹಲ್ಲೆಗೊಳಗಾದವರು.ಮನೆಗೆ ದಿನಸಿ ತರಲೆಂದು ಕೈಕಾರ ಜಂಕ್ಷನ್‌ಗೆ ತೆರಳಿ ಖರೀದಿಸಿ ವಾಪಸ್ಸು ಮನೆ ಕಡೆಗೆ ಹೋಗುತ್ತಿರುವಾಗ,ಒಳಮೊಗರು ಗ್ರಾಮದ ಕೈಕಾರ ಸರಕಾರಿ ಶಾಲೆಯ ಬಳಿ ಪರಿಚಯದ ರವೀಂದ್ರ ನಾಯ್ಕರವರು ಹಳೆಯ ದ್ವೇಷದಿಂದ ಅವಾಚ್ಯವಾಗಿ ಬೈದು, ಕೈಯ್ಯಲ್ಲಿದ್ದ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ.ಇದೇ ಅಕ್ಕನ ಗಂಡ ಶೇಖರ್ ಎಂಬವರು ಬರುವುದನ್ನು ನೋಡಿ ಹಲ್ಲೆ ನಡೆಸಿದ ರವಿಂದ್ರ ನಾಯ್ಕ ಅವರು ಜೀವಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ ಎಂದು ಶುಭೋದಯ ಅವರು ಆರೋಪಿಸಿದ್ದಾರೆ.ಹಲ್ಲೆಗೊಳಗಾದ ಶುಭೋದಯ ಅವರು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಘಟನೆ ಕುರಿತು ಸಂಪ್ಯ ಪೊಲೀಸರು ಆರೋಪಿ ವಿರುದ್ಧ ಕಲಂ 324 504 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here