ಆಲಂಕಾರಿನಲ್ಲಿ ಬಿ.ಜೆ.ಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

0

ಆಲಂಕಾರು: ಮಂಗಳೂರು ಲೋಕ ಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿ ಬೃಜೇಶ್ ಚೌಟರವರು ಅತ್ಯಧಿಕ ಮತಗಳಿಂದ ವಿಜಯ ಗಳಿಸಿದ್ದಕ್ಕೆ ಆಲಂಕಾರು ಪೇಟೆಯಲ್ಲಿ ಬಿ.ಜೆ.ಪಿ ಕಾರ್ಯಕರ್ತರು ಸಂಭ್ರಮಾಚರಣೆಯನ್ನು ಆಚರಿಸಿದರು.ಬಿ.ಜೆ.ಪಿ ಸುಳ್ಯ ಮಂಡಲದ ಪ್ರಬುದ್ಧರ ಪ್ರಕೋಷ್ಠ ಸಂಚಾಲಕ ಧರ್ಮಪಾಲ ರಾವ್ ಕಜೆ,ಬಿ.ಜೆ ಪಿ ಜಿಲ್ಲಾ ಎಸ್.ಟಿ ಮೋರ್ಚದ ಪ್ರದಾನ ಕಾರ್ಯದರ್ಶಿ ಪೂವಪ್ಪ ನಾಯ್ಕ್ ಎಸ್ ರವರು ದಕ್ಷಿಣ ಕನ್ನಡ ದಲ್ಲಿ‌ ಬೃಜೇಶ್ ಚೌಟ ರವರು ಅತ್ಯದಧಿಕ‌ ಮತಗಳಿಂದ ವಿಜಯ ಗಳಿಸಿದ್ದಕೆ ಮತದಾರ ಬಾಂಧವರಿಗೆ ಹಾಗು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು.

ಸುಳ್ಯ ಮಂಡಲ ಬಿ.ಜೆ.ಪಿ ಹಿಂದುಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸದಾನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಶೀನಪ್ಪ ಕುಂಬಾರ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮ ದಲ್ಲಿ ಬಿ.ಜೆ.ಪಿ ಸುಳ್ಯ ಮಂಡಲ ಪದಾಧಿಕಾರಿಗಳು, ಸದಸ್ಯರು,ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರ,ಬೂತ್ ಸಮಿತಿಯ ಅಧ್ಯಕ್ಷರು,ಪದಾಧಿಕಾರಿಗಳು, ಸದಸ್ಯರು, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು,ಕಾರ್ಯಕರ್ತರು, ಮತದಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here