ಪುಣ್ಚಪ್ಪಾಡಿ ಸಾರಕರೆ ಮಹಾಬಲ ಶೆಟ್ಟಿ ಕೊಮ್ಮಂಡರವರ ತೋಟಕ್ಕೆ ಆನೆ ದಾಳಿ, ಒಂದು ಲಕ್ಷ ರೂ, ನಷ್ಟ

0

ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಸಾರಕರೆ ಎಂಬಲ್ಲಿ ನ್ಯಾಯವಾದಿ ಮಹಾಬಲ ಶೆಟ್ಟಿ ಕೊಮ್ಮಂಡರವರ ಕೃಷಿ ತೋಟಕ್ಕೆ ಜೂ. 6 ರಂದು ರಾತ್ರಿ 11. 15 ರ ಸಮಯದಲ್ಲಿ ಕಾಡನೆಯೊಂದು ದಾಳಿ ಮಾಡಿ ಅಪಾರ ಕೃಷಿ ನಾಶವಾಗಿದೆ. ಮಹಾಬಲ ಶೆಟ್ಟಿ ಯವರ ಕೃಷಿ ಭೂಮಿಯಲ್ಲಿ ಆನೆ ದಾಳಿಯಿಂದ ತೆಂಗು, ಅಡಿಕೆ ಹಾಗೂ ಬಾಳೆ ಗಿಡ ನಾಶವಾಗಿದ್ದು, ಸುಮಾರು 1 ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ

ಒಲೆಮುಂಡೋವು ಕಡೆಯಿಂದ ಬಂದ ಆನೆ
ಪುಣ್ಚಪ್ಪಾಡಿ ಗ್ರಾಮದ ಸಾರಕರೆಯ ನಮ್ಮ ಕೃಷಿ ಭೂಮಿಗೆ ಬಂದ ಕಾಡನೆಯು ಒಲೆಮುಂಡೋವು ಪ್ರದೇಶದಿಂದ ರಾತ್ರಿ‌11. 15 ರ ವೇಳೆಗೆ ಬಂದಿದ್ದು, ಸುಮಾರು 1 ತಾಸುಗಿಂತಲೂ ಹೆಚ್ಚು ಸಮಯ ತೋಟದಲ್ಲಿ‌ ಆನೆ ದಾಂದಲೆ ಮಾಡಿದೆ ಎಂದು ನ್ಯಾಯವಾದಿ ಮಹಾಬಲ ಶೆಟ್ಟಿ ಕೊಮ್ಮಂಡ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here