ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳೊಂದಿಗೆ ಸಂವಾದ

0

ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನಲ್ಲಿ, ಕಳೆದ ಶೈಕ್ಷಣಿಕ ಸಾಲಿನ ಸಾಧಕ ವಿದ್ಯಾರ್ಥಿಗಳಾದ ಮೋಕ್ಷ, ಯು ಅಮೃತಾ ದೇವಿ, ಸುಮಂತ್‌ ಶೆಟ್ಟಿ ಎಸ್‌, ಆಕಾಶ್‌ ಸಾಲಿಯಾನ್‌, ಧನರಾಜ್‌ ಎಂ ಹಾಗೂ ಪಿ ಸಿಂಚನ್‌ ರಾವ್‌ ಪ್ರಸ್ತುತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಾಧಕ ವಿದ್ಯಾರ್ಥಿಗಳು, ಪರೀಕ್ಷಾ ಪೂರ್ವ ತಯಾರಿ, ಅಧ್ಯಯನ ವಿಷಯಗಳು ಸೇರಿದಂತೆ ಹಲವು ವಿಷಯಗಳ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಜೆಇಇ, ನೀಟ್‌ ಹಾಗೂ ಸಿಇಟಿ ಪರೀಕ್ಷೆಗಳ ವಿಶೇಷ ತರಗತಿ ಉದ್ಘಾಟನೆ ಮತ್ತು ಡಿಟಿಡಿ(ಡೈಲಿಟೆಸ್ಟ್‌ ಡ್ರೈವ್‌) ಅಧ್ಯಯನ ಸಾಮಾಗ್ರಿಗಳನ್ನು ಬಿಡುಗಡೆಗೊಳಿಸಲಾಯಿತು. ಸಮಾರಂಭದಲ್ಲಿ ಆಡಳಿತ ಮಂಡಳಿಯ ಸದಸ್ಯರು ಸುಧಾಕರಶೆಟ್ಟಿ, ವಿದ್ಯಾಧರ ಜೈನ್‌ ಮತ್ತು ಪ್ರಾಂಶುಪಾಲ ಎಚ್‌ ಕೆ ಪ್ರಕಾಶ್‌, ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು. ಭೌತಶಾಸ್ತ್ರ ಉಪನ್ಯಾಸಕಿ ಸ್ವಾತಿಬಿಎಸ್‌ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here