ಈಶ್ವರಮಂಗಲ‌ ಪಂಚೋಡಿಯಲ್ಲಿ ಪಾದಚಾರಿಗೆ ಬೈಕ್ ಡಿಕ್ಕಿ

0

ಪುತ್ತೂರು: ಈಶ್ವರಮಂಗಲ‌ ಪಂಚೋಡಿಯಲ್ಲಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ವರಿಗೆ ಅವರ ಹಿಂದಿನಿಂದ ಬಂದು ಬೈಕ್ ಡಿಕ್ಕಿಯಾದ ಘಟನೆ ಜೂ.17ರಂದು ನಡೆದಿದೆ.
ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಿವಾಸಿಯಾಗಿದ್ದು, ಪ್ರಸ್ತುತ ನೆಟ್ಟಣಿಗೆಮುಡ್ನೂರು ಗ್ರಾಮದಲ್ಲಿ ವಾಸ್ತವ್ಯ ಇರುವ ಬಸವರಾಜ (37 ವ) ಗಾಯಾಳು. ಅವರು ಸಂಜೆ, ಈಶ್ವರಮಂಗಲ- ಪಳ್ಳತ್ತೂರು ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಡೆದುಕೊಂಡು, ಪಂಚೋಡಿ ಕಡೆ ಅಂಗಡಿಗೆ ಹೋಗುತ್ತಿದ್ದಾಗ ಪಂಚೋಡಿ ಸಮೀಪ ಅವರ ಹಿಂದಿನಿಂದ ಅಪ್ಸಲ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಬಸವರಾಜ್ ಅವರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಬಸವರಾಜು ಅವರು ಗಾಯಗೊಂಡಿದ್ದು ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

LEAVE A REPLY

Please enter your comment!
Please enter your name here