ಜೂ.21: ನರಿಮೊಗರು ಪ್ರಸಾದಿನೀ ಆಯುರ್ನಿಕೇತನದಲ್ಲಿ ಯೋಗ ಉತ್ಸವ

0

ಪುತ್ತೂರು: ಯೋಗ ದಿನಾಚರಣೆಯ ಅಂಗವಾಗಿ ಪುತ್ತೂರಿನ ನರಿಮೊಗರಿನಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್ ನಲ್ಲಿ “ಯೋಗ ಉತ್ಸವ ” ಕಾರ್ಯಕ್ರಮ ಜೂ.21ರಂದು ಸಂಜೆ 6 ಗಂಟೆಗೆ ನಡೆಯಲಿದೆ.


ಅಂತಾರಾಷ್ಟ್ರೀಯ ಯೋಗಪಟು ತೃಪ್ತಿ . ಎನ್ . ಇವರಿಂದ ಯೋಗಾಸನ ಪ್ರದರ್ಶನ ಪ್ರಾತ್ಯಕ್ಷಿಕೆ ನಡೆಯಲಿದೆ. ಆಸ್ಪತ್ರೆಯ ಆಡಳಿತ ನಿರ್ದೇಶಕ ಹಾಗೂ ಆಯುರ್ವೇದ ತಜ್ಞ ವೈದ್ಯ ಡಾ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರಿಂದ “. ಮನಸ್ಸು ಮತ್ತು ಯೋಗ ಮಾರ್ಗ , ಲಾಭೋಪಾಯ ” ಎಂಬ ವಿಷಯದ ಕುರಿತು ಸತ್ಸಂಗ ನಡೆಯಲಿದೆ . ಉದ್ಘಾಟನೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಾ ಬ್ಯಾಂಕ್ ನಿವೃತ್ತ ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ ರೋಟರಿಯನ್ ಎ . ಜಗಜೀವನ್ ದಾಸ್ ರೈ ಇವರು ವಹಿಸಿಕೊಳ್ಳಲಿದ್ದಾರೆ . ಧನ್ವಂತರಿ ಸುಳಾದಿ, ಭಜನೆಯನ್ನು ಕು ಸುಧೀಕ್ಷಾ ಹಾಗೂ ಕು . ಸುನಿಧಿ ನಡೆಸಿಕೊಡಲಿದ್ದಾರೆ ಎಂದು ಆಸ್ಪತ್ರೆಯ ವ್ಯವಸ್ಥಾಪನಾ ನಿರ್ದೇಶಕಿ ಡಾ . ಶ್ರುತಿ .ಎಂ . ಎಸ್ . ತಿಳಿಸಿದ್ದಾರೆ . ಹೆಚ್ಚಿನ ಮಾಹಿತಿಗೆ 9740545979 ದೂರವಾಣಿಗೆ ಕರೆ ಮಾಡಲು ಕೋರಿದ್ದಾರೆ .

LEAVE A REPLY

Please enter your comment!
Please enter your name here