ಆನಡ್ಕ ಶಾಲಾ ಮಂತ್ರಿಮಂಡಲ ರಚನೆ

0

ನಾಯಕನಾಗಿ ಕೆ ಅಶ್ವಿತ್ ನಾಯಕ್ ಉಪನಾಯಕಿಯಾಗಿ ಕೌಶಿತ ಆಯ್ಕೆ

ಪುತ್ತೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಇಲ್ಲಿನ ಮಂತ್ರಿ ಮಂಡಲವನ್ನು ರಚಿಸಲಾಯಿತು. ಶಾಲಾ ನಾಯಕನಾಗಿ ಕೆ ಅಶ್ವಿತ್ ಕುಮಾರ್ ಹಾಗೂ ಉಪನಾಯಕಿಯಾಗಿ ಕುಮಾರಿ ಕೌಶಿತ ಚುನಾಯಿತರಾಗಿದ್ದಾರೆ.


ವಿರೋಧಪಕ್ಷದ ನಾಯಕನಾಗಿ ವಿಶಾಂತ್ ,ಉಪನಾಯಕನಾಗಿ ಮನ್ವಿತ್ ,ಶಿಕ್ಷಣ ಮಂತ್ರಿಯಾಗಿ ರೋಹಿಣಿ, ಆರೋಗ್ಯಮಂತ್ರಿಯಾಗಿ ಭೂಮಿಕ ,ಉಪ ಆರೋಗ್ಯಮಂತ್ರಿಯಾಗಿ ದೀಪಕ್, ಆಹಾರ ಮಂತ್ರಿಯಾಗಿ ವಿದ್ಯಾ ,ಉಪ ಆಹಾರ ಮಂತ್ರಿಯಾಗಿ ಶ್ರೀಯ, ಕ್ರೀಡಾಮಂತ್ರಿಯಾಗಿ ಪ್ರಗತಿ, ಉಪ ಕ್ರೀಡಾ ಮಂತ್ರಿಯಾಗಿ ವಿವೇಕ್, ಗೃಹ ಮಂತ್ರಿಯಾಗಿ ಪೃಥ್ವಿ, ಉಪ ಗೃಹಮಂತ್ರಿಯಾಗಿ ಪ್ರೀತಮ್, ನೀರಾವರಿ ಮಂತ್ರಿಯಾಗಿ ಜಿತೇಶ್, ಉಪ ನೀರಾವರಿ ಮಂತ್ರಿ ಆಗಿ ಧನ್ವಿತ್, ವಾರ್ತಾ ಮಂತ್ರಿಯಾಗಿ ತನ್ವಿ, ಉಪ ವಾರ್ತಾಮಂತ್ರಿಯಾಗಿ ಪ್ರಣವ್, ಸ್ವಚ್ಛತಾ ಮಂತ್ರಿಯಾಗಿ ಕೃತಿಕಾ, ಉಪ ಸ್ವಚ್ಛತಾ ಮಂತ್ರಿಯಾಗಿ ಪೂರ್ವಿತ್, ಗ್ರಂಥಾಲಯ ಮಂತ್ರಿಯಾಗಿ ಅರ್ಪಿತ, ಉಪ ಗ್ರಂಥಾಲಯ ಮಂತ್ರಿಯಾಗಿ ಧನ್ವಿತ್, ತೋಟಗಾರಿಕಾ ಮಂತ್ರಿಯಾಗಿ ದಿವ್ಯಂ, ಉಪ ತೋಟಗಾರಿಕಾ ಮಂತ್ರಿಯಾಗಿ ಸುಜಿತ್ ಅಭಿವೃದ್ಧಿ ಮಂತ್ರಿಯಾಗಿ ಕೃತಿ, ಉಪ ಅಭಿವೃದ್ಧಿ ಮಂತ್ರಿಯಾಗಿ ರಚನಾ ಆಯ್ಕೆಗೊಂಡರು.

ಆಯ್ಕೆಯಾದ ಮಂತ್ರಿಗಳಿಗೆ ತಮ್ಮ ಕಾರ್ಯಭಾರವನ್ನು ತಿಳಿಸಿಕೊಡಲಾಯಿತು .ಶಾಲಾ ಮುಖ್ಯ ಗುರು ಫೆಲ್ಸಿಟಾ ರವರು ಪ್ರಮಾಣವಚನ ನೀಡಿದರು. ಶಿಕ್ಷಕರಾದ ವಿಶಾಲಾಕ್ಷಿ, ಮಾಲತಿ, ಸೌಮ್ಯ, ನೀತಾ ಹಾಗೂ ಸುನಿಲ್ ಸಹಕರಿಸಿದರು.

LEAVE A REPLY

Please enter your comment!
Please enter your name here