ಉರಮಾಲ್‌ ಮುಸ್ತಫಾ ಕುವೈಟ್ ಹೃದಯಾಘಾತದಿಂದ ನಿಧನ

0

ಪುತ್ತೂರು: ಮೂಲತಃ ಪುತ್ತೂರಿನ ಉರಮಾಲ್‌ ನಿವಾಸಿಯಾಗಿದ್ದು ಸದ್ಯ ಮಂಗಳೂರಿನಲ್ಲಿ ವಾಸವಿರುವ ಮುಸ್ತಫಾ ಸಾಲ್ಮರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಉರಮಾಲ್‌ ದಿ. ಸಾಲ್ಮರ ಅಹ್ಮದ್‌ ಅವರ ಪುತ್ರರಾಗಿರುವ ಮುಸ್ತಫಾ ಈ ಹಿಂದೆ ಕುವೈಟ್‌ ನಲ್ಲಿ ಉದ್ಯಮ ನಡೆಸುತ್ತಿದ್ದರು. ಕಾರ್ಯಕ್ರಮದ ನಿಮಿತ್ತ ಉಡುಪಿಯ ಕುಟುಂಬದ ಮನೆಗೆ ತೆರಳಿದ್ದ ವೇಳೆ ಆರೋಗ್ಯದಲ್ಲಿ ಏರುಪೇರಾಗಿದೆ. ತೀವ್ರ ಹೃದಯಾಘಾತಕ್ಕೆ ಒಳಗಾದ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಮಕ್ಕಳು, ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪಾರ್ಥಿವ ಶರೀರವನ್ನು ಉರಮಾಲ್‌ ಮನೆಗೆ ತರಲಾಗುತ್ತಿದ್ದು ಸಾಲ್ಮರ ಮಸೀದಿ ವಠಾರದಲ್ಲಿ ಧಪನ ಕಾರ್ಯ ನಡೆಯಲಿದೆ.

LEAVE A REPLY

Please enter your comment!
Please enter your name here