ಇಡಬೆಟ್ಟು: ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಸರ ಮಾಹಿತಿ, ಗಿಡನಾಟಿ ಕಾರ್ಯಕ್ರಮ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಪರಿಸರ ಮಾಹಿತಿ ಮತ್ತು ಗಿಡನಾಟಿ ಕಾರ್ಯಕ್ರಮವನ್ನು ಇಡಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಯೋಜನೆಯ ವಲಯಾಧ್ಯಕ್ಷ ಎಸ್ ಮಾಧವ ರೈ ಕುಂಬ್ರರವರು ನೆರವೇರಿಸಿದರು. ಕಾರ್ಯ

ಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅದ್ರಾಮರವರು ವಹಿಸಿದ್ದರು, ಕೃಷಿ ಮೇಲ್ವಿಚಾರಕರಾದ ಶಿವರಂಜನ್‌ರವರು ಪರಿಸರದ ಬಗ್ಗೆ ಮಾಹಿತಿ ನೀಡಿದರು,ಮುಖ್ಯಗುರು ಪ್ರೇಮ, ವಲಯ ಮೇಲ್ವಿಚಾರಕಿ ಜಯಂತಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್, ಅರ್ಯಾಪು ಒಕ್ಕೂಟದ ಸೇವಾಪ್ರತಿನಿದಿ ನಳಿನಾಕ್ಷಿ, ಕುಂಬ್ರ ಒಕ್ಕೂಟದ ಸೇವಾಪ್ರತಿನಿಧಿ ಶಶಿಕಲಾ, ಶಿಕ್ಷಕರಾದ ದೇವಪ್ಪ, ಜಿಪಿಟಿ ಆಶಾ ಬಿ ಯಸ್, ಅತಿಥಿ ಶಿಕ್ಷಕಿ ಸಂದ್ಯಾ ಗೌಡ, ಎಸ್‌ಡಿಎಂಸಿ ಸದಸ್ಯರು, ಮಕ್ಕಳ ಪೋಷಕರು, ಹಾಗು ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here