ಕಡಬ: ಕ್ನಾನಾಯ ಜ್ಯೋತಿ ಆ.ಮಾ.ಶಾಲೆಯಲ್ಲಿ ’ಆರೋಗ್ಯ-ಶುಚಿತ್ವ’ ಜಾಗೃತಿ ಕಾರ್ಯಕ್ರಮ

0

ಕಡಬ: ಇಲ್ಲಿನ ಕ್ನಾನಾಯ ಜ್ಯೋತಿ ಆಂಗ್ಲಮಾಧ್ಯಮ ಶಾಲೆಯಲ್ಲಿ ’ಹದಿಹರೆಯದಲ್ಲಿ ಆರೋಗ್ಯ ಮತ್ತು ಶುಚಿತ್ವ’ ಎಂಬ ವಿಷಯದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.
ರಾಷ್ಟ್ರೀಯ ಕಿಶೋರ್ ಸ್ವಾಸ್ತ್ಯ ಕಾರ್ಯಕ್ರಮದ ಕೌನ್ಸೆಲರ್ ಶ್ವೇತಾ ಕೆ.,ಅವರು ಮಾಹಿತಿ ನೀಡಿದರು. 6ನೇ ತರಗತಿಯಿಂದ 10ನೇ ತರಗತಿಯ ತನಕದ ಮಕ್ಕಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಮುಖ್ಯೋಪಾಧ್ಯಾಯಿನಿ ಸಿ|ಮರಿಯಾ ಲೂಯಿಸಾ ಉಪಸ್ಥಿತರಿದ್ದರು. ಅನ್ವಿತಾ ವಂದಿಸಿದರು. ಶಿಕ್ಷಕ ಶೈಜು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here