ಕೌಡಿಚ್ಚಾರು ಪರಿಸರದಲ್ಲಿ ಸುಂಟರಗಾಳಿ – ಅಪಾರ ಹಾನಿ

0

ಪುತ್ತೂರು: ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೌಡಿಚ್ಚಾರು, ಸಿ.ಆರ್.ಸಿ ಕಾಲೊನಿ, ಬೆರ್ನಂತಿ, ಮುಂತಾದ ಕಡೆಗಳಲ್ಲಿ ಸುಂಟರಗಾಳಿ ಬೀಸಿದ್ದು ಅನೇಕ ಮನೆ ಮತ್ತು ಕೃಷಿಗೆ ಹಾನಿಯಾಗಿದೆ.


ಗಾಳಿಯ ರಭಸಕ್ಕೆ ಮರಗಳು ಉರುಳಿ ಬಿದ್ದಿದೆ. ಕಾವು 33/11 ಕೆ.ವಿ ಸಬ್ ಸ್ಟೇಷನ್ ಸಂಪರ್ಕಿಸುವ ವಿದ್ಯುತ್ ತಂತಿಗಳ ಮೇಲೆ ಕೌಡಿಚ್ಚಾರಿನಲ್ಲಿ ಮರ ಉರುಳಿ ಬಿದ್ದಿದ್ದು,ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಘಟನಾ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯರಾದ ನಾರಾಯಣ ನಾಯ್ಕ ಚಾಕೋಟೆ, ಭಾರತಿ ವಸಂತ್ ಕೌಡಿಚ್ಚಾರು ಮತ್ತು ಸೌಮ್ಯಾ ಬಾಲಸುಬ್ರಹ್ಮಣ್ಯ ಭೇಟಿ ನೀಡಿದ್ದಾರೆ. ಪಾಣಾಜೆ ವಲಯ ಅರಣ್ಯಾಧಿಕಾರಿ ಮದನ್ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here