ಬೆಳ್ಳಿಪ್ಪಾಡಿ: ಕಟಾರ ಅಂದ್ರಿಗೇರಿಯಲ್ಲಿ ಮರ ಬಿದ್ದು ವಿದ್ಯುತ್ ತಂತಿಗೆ ಹಾನಿ

0

ಪುತ್ತೂರು: ವಾರದ ಹಿಂದೆಯಷ್ಟೆ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ತೊಡಕಾಗಿದ್ದ ಭಾಗದಲ್ಲಿ ಇದೀಗ ಮತ್ತೆ ಮರ ಬಿದ್ದು ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ.

ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಅಂದ್ರಿಗೇರಿ ಎಂಬಲ್ಲಿ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಮದ್ಯಾಹ್ನದ ವೇಳೆ ಮೆಸ್ಕಾಂ ಪವರ್ ಮ್ಯಾನ್ ಗಳು ಬಂದು ಕ್ರೈನ್ ಮೂಲಕ ಮರದ ಗೆಲ್ಲು ತೆರವು ಮಾಡಿ ವಿದ್ಯುತ್ ತಂತಿಗಳ‌ ಜೋಡಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here