ಉಪ್ಪಳಿಗೆ: ಶ್ರೀವಿಷ್ಣು ಯುವಕ ಮಂಡಲ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷ ಬಾಲಕೃಷ್ಣ ನಾೖಕ್‌, ಕಾರ್ಯದರ್ಶಿ ಹರೀಶ್

0

ಪುತ್ತೂರು: ಇರ್ದೆ-ಉಪ್ಪಳಿಗೆ ಶ್ರೀ ವಿಷ್ಣು ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ನಾೖಕ್‌ ಉಪ್ಪಳಿಗೆ ಹಾಗೂ ಕಾರ್ಯದರ್ಶಿಯಾಗಿ ಹರೀಶ್ ಉಪ್ಪಳಿಗೆಯವರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಗಂಗಾಧರ ಆಳ್ವ ಅಜಲಡ್ಕ, ಉಪಾಧ್ಯಕ್ಷರಾಗಿ ಜಯಪ್ರಸಾದ್ ಚೆಲ್ಯಡ್ಕ, ಖಜಾಂಚಿಯಾಗಿ ರಕ್ಷಿತ್‌ರವರು ಆಯ್ಕೆಯಾಗಿದ್ದಾರೆ. ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ದಾಸ್ ಪ್ರಕಾಶ್ ರೈ ಉಪ್ಪಳಿಗೆ, ಪ್ರಕಾಶ್ ರೈ ಬೈಲಾಡಿ ಶಿವಪ್ರಸಾದ್ ಯು., ಪುತ್ತು ಸಿ ಚೆಲ್ಯಡ್ಕ, ಚರಣ್ ಯು., ದಿಲೀಪ್ ಆಚಾರ್ಯ, ದೇವಿಕಿರಣ್, ಹರ್ಷಿತ್, ಕಾರ್ತಿಕ್ ಡಿ. ಸೇರಿದಂತೆ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here