ಪಡುಬೆಟ್ಟು ದೇವಸ್ಥಾನ ಸುತ್ತುವರಿದ ನೀರು

0

ನೆಲ್ಯಾಡಿ: ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೆಲ್ಯಾಡಿ ಗ್ರಾಮದ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸುತ್ತಲೂ ನೀರು ಆವರಿಸಿದ್ದು ಅಂಗಣದೊಳಗೂ ನೀರು ಪ್ರವೇಶಿಸಿತ್ತು.
ಬುಧವಾರ ಮಧ್ಯಾಹ್ನದ ಬಳಿಕ ಈ ಪರಿಸರದಲ್ಲಿ ಭಾರೀ ಮಳೆಯಾಗಿದ್ದು ದೇವಸ್ಥಾನದ ಸುತ್ತಲೂ ಹರಿದುಬಂದ ನೀರು ದೇವಸ್ಥಾನವನ್ನು ಆವರಿಸಿತ್ತು. ದೇವಸ್ಥಾನದ ಅಂಗಣದೊಳಗೂ ನೀರು ಪ್ರವೇಶಿಸಿದ್ದು ಸುಮಾರು 2 ಅಡಿಯಷ್ಟೂ ನೀರು ನಿಂತಿತ್ತು. ದೇವಸ್ಥಾನದ ಪಕ್ಕದಲ್ಲೇ ಹರಿಯುವ ತೋಡು ಸಹ ತುಂಬಿ ಹರಿಯುತ್ತಿದೆ. ಈ ಪರಿಸರದಲ್ಲಿನ ಗದ್ದೆ, ತೋಟಗಳಿಗೂ ನೀರು ನುಗ್ಗಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here