ಸ್ಪಂದನ ಸಹಾಯನಿಧಿ ಸೇವಾ ಟ್ರಸ್ಟ್‌ ನಿಂದ ಆಹಾರ ಸಾಮಾಗ್ರಿಗಳ ಕಿಟ್‌ ವಿತರಣೆ

0

ಪುತ್ತೂರು: ಸ್ಪಂದನ ಸಹಾಯನಿಧಿ ಸೇವಾ ಟ್ರಸ್ಟ್‌ ವತಿಯಿಂದ 22ನೇ ಆಹಾರ ಸಾಮಾಗ್ರಿಗಳ ಕಿಟ್‌ ವಿತರಣಾ ಕಾರ್ಯಕ್ರಮ ಜು.14ರಂದು ನಗರದ ಲಯನ್ಸ್‌ ಕ್ಲಬ್‌ ಸಭಾಂಗಣದಲ್ಲಿ ನಡೆಯಿತು.

ಬೆಂಗಳೂರಿನ ಖಾಸಗಿ ಕಂಪೆನಿಯೊಂದರ ಉದ್ಯೋಗಿ ಸಾಫ್ಟ್ ವೇರ್‌ ಇಂಜಿನಿಯರ್‌ ಶ್ರೇಯಾ ಮತ್ತು ಸೀನಿಯರ್‌ ಸಿಟಿಜನ್ಸ್‌ ಕ್ಲಬ್‌ ಇದರ ಕೋಶಾಧಿಕಾರಿ ಸುಮಂಗಲ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 23 ಕುಟುಂಬಕ್ಕೆ ಒಂದು ತಿಂಗಳಿಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಇದೇ ವೇಳೆ ಕೆಮ್ಮಾಯಿ ಮತ್ತು ಪಡೀಲ್‌ ನ ಇಬ್ಬರು ವಿದ್ಯಾರ್ಥಿಗಳಿಗೆ 5 ಸಾವಿರದಂತೆ ವಿದ್ಯಾರ್ಥೀ ವೇತನವನ್ನು ಮತ್ತು ತೆಂಕಿಲ ನಿವಾಸಿಯೊಬ್ಬರಿಗೆ ಚಿಕಿತ್ಸೆಗಾಗಿ 5 ಸಾವಿರ ರೂಪಾಯಿಗಳ ಸಹಾಯಧನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್‌ ಅಧ್ಯಕ್ಷೆ ಸುಮಿತ್ರ, ಸಂಚಾಲಕರಾದ ಅವಿನಾಶ್‌ ಸೇರಿದಂತೆ ಸದಸ್ಯರು, ಇನ್ನಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here