ಜು.26ರಂದು ಕರ್ನಾಟಕದಾದ್ಯಂತ ತೆರೆ ಕಾಣಲಿದೆ “ಸಾಂಕೇತ್‌” ಚಲನಚಿತ್ರ

0

ಮಂಗಳೂರು: ರಿವರ್‌ ಸ್ಟ್ರೀಮ್ ಸ್ಟುಡಿಯೋಸ್‌ನಲ್ಲಿ ನಿರ್ಮಾಣಗೊಂಡ ಸಾಂಕೇತ್‌ ಚಲನಚಿತ್ರ ಜು.26ರಂದು ಇಡೀ ಕರ್ನಾಟಕದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕಿ ಜ್ಯೋತ್ಸ್ನಾ ಕೆ ರಾಜ್ ಅವರು,  ಜನರ ಮಧ್ಯೆ ಇರುವ ಕಥೆಯನ್ನು ಸಮಾಜದ ಕನ್ನಡಿಯಂತೆ ನಾವು ನಿರೂಪಿಸಿದ್ದೇವೆ. ನಮ್ಮ ತಂಡ ಸಾಕಷ್ಟು ಶ್ರಮ ವಹಿಸಿ ಈ ಚಿತ್ರವನ್ನು ಮಾಡಿದೆ. ಪ್ರತಿಯೊಂದನ್ನು ಅಧ್ಯಯನ ನಡೆಸಿ ನಾವೇ ಚಿತ್ರವನ್ನು ತಯಾರಿಸಿದ್ದು, ಅತ್ಯಂತ ಚಿಕ್ಕ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಿದ್ದು, ಪೂರ್ಣಗೊಳಿಸಲು ಮೂರು ವರ್ಷ ತೆಗೆದುಕೊಂಡಿದೆ.ಈ ಹೊಸ ತಂಡದ ಪ್ರಯೋಗಕ್ಕೆ ಸಿನಿ ಪ್ರೇಕ್ಷಕರು ಶುಭ ಹಾರೈಸಿ ಎಂದು ಮನವಿ ಮಾಡಿದರು.

ರಾಹುಲ್‌ ಅಮೀನ್‌ ಮಾತನಾಡಿ ಚಿತ್ರಕ್ಕೋಸ್ಕರವೇ ಅಧ್ಯಯನ ಮಾಡಿ ಚಿತ್ರ ನಿರ್ಮಾಣ ಮಾಡಿದ್ದೇವೆ ಎಂದರು. ನಟಿ ಚೈತ್ರಾ ಶೆಟ್ಟಿ ಮಾತನಾಡಿ ಅತ್ಯುತ್ತಮ ಪಾತ್ರವೊಂದನ್ನು ನನಗೆ ಇದರಲ್ಲಿ ಕೊಟ್ಟಿದ್ದಾರೆ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮ್ಮನ್ನು, ಚಿತ್ರ ತಂಡವನ್ನು ಪ್ರೋತ್ಸಾಹಿಸಿ ಎಂದರು. ಚಿತ್ರ ತಂಡದ ಪ್ರಮುಖರಾದ ವಿಕ್ಕಿರಾವ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಯಲ್ಲಿ ಉಪಸ್ಥಿತರಿದ್ದರು. ಚಿತ್ರದಲ್ಲಿ ವಿಕ್ಕಿ ರಾವ್, ಮೋಹನ್‌ ಶೇಣಿ, ರೂಪಾಶ್ರೀ ವರ್ಕಾಡಿ, ರಾಹುಲ್ ಅಮೀನ್‌, ನಿರೀಕ್ಷಾ ಶೆಟ್ಟಿ  ಮೊದಲಾದವರು ನಟಿಸಿದ್ದಾರೆ.

LEAVE A REPLY

Please enter your comment!
Please enter your name here