ಹಿಂದೂ ಧಾರ್ಮಿಕ ಶಿಕ್ಷಣ -ಮಾಹಿತಿ ಸಭೆ

0

ಪುತ್ತೂರು: ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭಜನಾ ಸಂಘ ಹಾಗೂ ಕುಣಿತ ಭಜನಾ ತಂಡದ ನೇತೃತ್ವದಲ್ಲಿ ಪಾಣಾಜೆ ಸಿ ಎ ಬ್ಯಾಂಕ್ ಸಭಾಭವನದಲ್ಲಿ ಜು.21ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರಂಭವಾದ ಹಿಂದೂ ಧಾರ್ಮಿಕ ಶಿಕ್ಷಣದ ಮಾಹಿತಿ ಕಾರ್ಯಕ್ರಮ ನಡೆಯಿತು.


ಸಂಪನ್ಮೂಲ ವ್ಯಕ್ತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಮಕ್ಕಳಿಗೆ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ಕಥೆ ಮತ್ತು ಆಚಾರ ವಿಚಾರ ಅದರ ಅರ್ಥ ಹೇಳಿಕೊಡುದರ ಮೂಲಕ ಮಾಹಿತಿ ನೀಡಿದರು. ರೂಪಲೇಖ ಪಾಣಾಜೆ ಇವರು ಜೀವನದಲ್ಲಿ ನಮ್ಮ ಸಂಸ್ಕಾರಕ್ಕೆ ಇರುವ ಪ್ರಾಮುಖ್ಯತೆ ತಿಳಿಸಿದರು. ನಿವೃತ್ತ ಮುಖ್ಯಗುರು ಶಿವಕುಮಾರ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಪಾಣಾಜೆ ಸಿ ಎ. ಬ್ಯಾಂಕ್ ಉಪಾಧ್ಯಕ್ಷ ಡಾಕ್ಟರ್ ಅಖಿಲೇಶ್ ಅರ್ಧಮೂಲೆ, ಕುಣಿತ ಭಜನೆ ತಂಡದ ವ್ಯವಸ್ಥಾಪಕ ಗಣಪತಿ ಬಲ್ಯಾಯ ಹಾಗೂ ನಿರ್ದೇಶಕಿ ಗುಣಶ್ರೀ, ಉದಯ ಸುಡುಕುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರವೀಂದ್ರ ಭಂಡಾರಿ ಪಾಣಾಜೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here