ನೆ.ಮುಡ್ನೂರು: ಚಾರ್ಪಟೆಯಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ

0

ಪುತ್ತೂರು: ಮನೆ ಮೇಲೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿದ ಘಟನೆ ನೆ.ಮುಡ್ನೂರು ಗ್ರಾಮದ ಚಾರ್ಪಟೆ ಎಂಬಲ್ಲಿ ಜು.25ರಂದು ನಡೆದಿದೆ.ಚಾರ್ಪಟೆ ನಿವಾಸಿ ರಾಮಣ್ಣ ಪೂಜಾರಿ ಎಂಬವರ ಮನೆ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದ್ದು ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಘಟನೆಯಿಂದ ಅಂದಾಜು 2 ಲಕ್ಷ ರೂ ನಷ್ಟ ಸಂಭವಿಸಿದೆ. ಸ್ಥಳಕ್ಕೆ ನೆ.ಮುಡ್ನೂರು ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನೆ.ಮುಡ್ನೂರು ಗ್ರಾ.ಪಂ ಸದಸ್ಯರಾದ ಶ್ರೀರಾಂ ಪಕ್ಕಳ, ಕುಮಾರನಾಥ ಪೂಜಾರಿ ಹಾಗೂ ಎನ್ ಮೂಸಾನ್, ಕೊರಗಪ್ಪ ಪೂಜಾರಿ, ದೇರಣ್ಣ ರೈ, ಹನೀಫ್ ಚಾರ್ಪಟೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here