ವಿದ್ಯಾರಶ್ಮಿ ವಿದ್ಯಾರ್ಥಿಗಳು ಕರಾಟೆ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಸಂತ ವಿಕ್ಟರ‍್ಸ್ ಹೈಸ್ಕೂಲ್ ನಲ್ಲಿ ಆ.5ರಂದು ನಡೆದ ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ 17ರ ವಯೋಮಾನದ ಹುಡುಗರ ವಿಭಾಗದಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳಾದ ಬಿ ವಿಘ್ನೇಶ್ ಶೆಟ್ಟಿ 10ನೇ ತರಗತಿ ಬಿ ಸಂಜೀವ ಶೆಟ್ಟಿ ಬೇಬಿ ಇವರ ಪುತ್ರ) ಹಾಗೂ 14ರ ವಯೋಮಾನದ ಹೃತೇಶ್ ಬಿ ಎಸ್ 8ನೇ ತರಗತಿ (ಶ್ರೀದರ್ ಬಿ ಎ ಶ್ರೀಮತಿ ರಮ ಬಿ ಎಸ್ ಇವರ ಪುತ್ರ) ಇವರು ಪ್ರಥಮ ಸ್ಥಾನ ಗೈದು ’ಜಿಲ್ಲಾ ಮಟ್ಟಕ್ಕೆ’ ಆಯ್ಕೆಯಾಗಿರುತ್ತಾರೆ.


. ವಿದಿಶಾ ಬಿ ಕೆ ೧೦ನೇ ತರಗತಿ ( ಬಾಲಚಂದ್ರ ಮತ್ತು ಶ್ರೀಮತಿ ಲೋಹಿತಾಕ್ಷಿ ಇವರ ) ಮತ್ತು ಕಿರಣ್ ಜಿ 8ನೇ ತರಗತಿ ( ಇ ಸಿ ಗಂಗಾಧರ ಮತ್ತು ಶ್ರೀಮತಿ ರಾಣಿ ಇವರ ಪುತ್ರ) ದ್ವಿತೀಯ ಸ್ಥಾನಗೈದಿರುತ್ತಾರೆ.


ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಮತ್ತು ಆಡಳಿತಾಧಿಕಾರಿ ಇಂಜಿನಿಯರ್ ಆಶ್ವಿನ್ ಎಲ್ ಶೆಟ್ಟಿಯವರು ಅಭಿನಂದಿಸಿದರು ತರಬೇತುದಾರರಾಗಿ ಶ್ರೀ ದಿನೇಶ್ ರವರು ಸಂಯೋಜಕರಾದ ಶ್ರೀ ಧನಂಜಯ ಮರ್ಕಂಜರವರು ಸಹಕರಿಸಿದರು ಎಂದು ಪ್ರಾಂಶುಪಾಲೆ ಶ್ರೀಮತಿ ಶಶಿಕಲಾ ಆಳ್ವರವರು ತಿಳಿಸಿದರು.

LEAVE A REPLY

Please enter your comment!
Please enter your name here