ಉದ್ಯಮಿ ಮಾಧವ ಮಾವೆಯವರಿಗೆ ಪಿತೃವಿಯೋಗ

0

ವಿಟ್ಲ: ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಮಲಾರು ನಿವಾಸಿ, ಸುಂದರ ಸಪಲ್ಯ ( 94 ವ.) ರವರು ಅಸೌಖ್ಯದಿಂದ ಆ.5ರಂದು ಪುತ್ತೂರಿ‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಕೃಷಿ ಜೊತೆಗೆ ಭಜನೆ ಮತ್ತು ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ಜಾನಕಿ ಎಸ್. ಸಹೋದರರಾದ ನಾರಾಯಣ ಸಪಲ್ಯ ಮಲಾರು, ಸೀನ ಸಪಲ್ಯ ಮಲಾರು, ಪುತ್ರರಾದ ಉದ್ಯಮಿ, ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಮಾಧವ ಎಸ್.ಮಾವೆ, ಉದ್ಯಮಿ ತಿಲಕ್ ಎಸ್. ಮಾವೆ, ಸಂತೋಷ್ ಕುಮಾರ್ ಮಾವೆ, ಪುತ್ರಿಯರಾದ ರತಿಜನಾರ್ದನ, ಗೀತಾಜಯಂತ, ಜಯಶ್ರೀ ಜನಾರ್ದನ, ಸುಪ್ರಿತಕಿಶೋರ್, ಸೌಮ್ಯವಸಂತ್, ಸೊಸೆಯಂದಿರಾದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಮಂಜುಳಾ ಮಾಧವ ಮಾವೆ, ಪ್ರಭಾತಿಲಕ್ ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.


ಮೃತರ ಮನೆಗೆ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ನೂರಾರು ಮಂದಿ ಆಗಮಿಸಿ ಅಂತಿಮ ದರುಶನ ಪಡೆದರು. ಸುಂದರ ಸಪಲ್ಯರವರ ನಿಧನಕ್ಕೆ ಶಾಸಕ ರಾಜೇಶ್ ನಾಯ್ಕ್ ಸಹಿತ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here