‘ಸಲಾಲ ಮೊಬೈಲ್ಸ್’ ಕಲ್ಲಾರೆಯಲ್ಲಿ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಮೊಬೈಲ್ ಫೋನ್ ಮಾರಾಟ ಮತ್ತು ಸೇವೆಯಲ್ಲಿ ಪ್ರಸಿದ್ದಿ ಪಡೆದಿರುವ, ಕಳೆದ ಹಲವಾರು ವರ್ಷಗಳಿಂದ ಪುತ್ತೂರು ಮುಖ್ಯ ರಸ್ತೆಯ ಕಲ್ಲಾರೆ ಜೆ.ಕೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸಲಾಲ ಮೊಬೈಲ್ಸ್ ಸ್ಥಳಾಂತರಗೊಂಡು ಕಲ್ಲಾರೆ ಕೃಷ್ಣ ಲಂಚ್ ಹೋಮ್ ಎದುರುಗಡೆ ಕಟ್ಟಡದಲ್ಲಿ ಆ.5ರಂದು ಶುಭಾರಂಭಗೊಂಡಿತು.

ಮಳಿಗೆಯನ್ನು ಉದ್ಘಾಟಿಸಿದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಮಾತನಾಡಿ ಸಲಾಲ ಮೊಬೈಲ್ಸ್ ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದು ಹಾರೈಸಿದರು. ಮಾರ್ಕ್ ಟೆಲಿಕಾಂನ ಶಶಿರಾಜ್, ಪದ್ಮಶ್ರೀ ಮೆಡಿಕಲ್ಸ್ ನ ತಾರಾನಾಥ ಮತ್ತಿತರ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು. ಉದ್ಯಮಿ ಅಬೂಬಕ್ಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸ್ವಾಗತಿಸಿದ ಸಲಾಲ ಮೊಬೈಲ್ಸ್ ನ ಮಾಲಕ ತಶ್ರೀಫ್ ಕಲ್ಲಗುಡ್ಡೆ ಮಾತನಾಡಿ ನಮ್ಮಲ್ಲಿ ಎಲ್ಲಾ ಕಂಪೆನಿಗಳ ಮೊಬೈಲ್ ಮಾರಾಟ ಮತ್ತು ಸೇವೆ ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಬಯಸಿದರು.

LEAVE A REPLY

Please enter your comment!
Please enter your name here