ಕೆಮ್ಮಿಂಜೆ: ವರಮಹಾಲಕ್ಷ್ಮೀ ಮತ್ತು ಸತ್ಯನಾರಾಯಣ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಪುತ್ತೂರು ರಾಮಕ್ಷತ್ರೀಯ ಸೇವಾ ಸಂಘ ಮತ್ತು ಕೆಮ್ಮಿಂಜೆ ಶ್ರೀರಾಮ ಭಜನಾ ಮಂಡಳಿ ಟ್ರಸ್ಟ್‌ ಇದರ ಆಶ್ರಯದಲ್ಲಿ ಆ.16ರಂದು ನಡೆಯಲಿರುವ ವರಮಹಾಲಕ್ಷ್ಮೀ ಪೂಜೆ ಹಾಗೂ ಆ.24ರಂದು ನಡೆಯಲಿರುವ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವಸ್ಥಾನದ ಭಜನಾ ಮಂದಿರದಲ್ಲಿ ಆ.4ರಂದು ಬಿಡುಗಡೆಗೊಳಿಸಲಾಯಿತು.

ಮಂದಿರದ ಅರ್ಚಕ ಶ್ಯಾಮಣ್ಣರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆಯಾಗಿ ಜಯಮಾಲ ಕೆಮ್ಮಾಯಿ ಹಾಗೂ ಕಾರ್ಯದರ್ಶಿಯಾಗಿ ಪ್ರಮೀಳಾ ಚಂದ್ರಶೇಖರ್‌ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಮಕ್ಷತ್ರೀಯ ಮಹಿಳಾ ಸಂಘದ ಅಧ್ಯಕ್ಷೆ ರೇಣುಕಾ ನವೀನ್‌ , ರಾಮಕ್ಷತ್ರೀಯ ಸೇವಾ ಸಂಘದ ಅಧ್ಯಕ್ಷ ಸುರೇಶ್‌ ಕುಮಾರ್‌ ಕೆಮ್ಮಿಂಜೆ, ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ್‌ ಕೆಮ್ಮಿಂಜೆ ಯುವ ಘಟಕದ ಅಧ್ಯಕ್ಷ ಅನೀಶ್‌ ಕುಮಾರ್‌, ಉಪಾಧ್ಯಕ್ಷ ಕಾರ್ತಿಕ್‌, ನಿತಿನ್‌ ಮಂಗಳ, ಬಾಲಚಂದ್ರ ಮೊಟ್ಟೆತ್ತಡ್ಕ, ನವೀನ್‌ ಪುನರ್ವಸು, ಕಿರಣ್‌, ಅರುಣ್‌ ಅಲಂಕಾರ್‌, ಸೌಮ್ಯ ಅರುಣ್‌, ದಯಾನಂದ, ಅಶೋಕ್‌, ಚಂದ್ರಪ್ರಭಾ, ಸ್ವರ್ಣ, ವೀಣಾ, ಪುಷ್ಪಲತಾ, ವಿಜಯಲಕ್ಷ್ಮೀ ಅತ್ತಾಳ, ನವೀನ್‌ ಕೊಂಬೆಟ್ಟು, ಪ್ರೇಮಲತಾ, ವಾಣಿ ಸುರೇಶ್‌, ನವೀನ್‌ ಪಡ್ಡಾಯೂರು ಸೇರಿದಂತೆ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here