ಆರ್ಲಪದವು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಮಹಾಸಭೆ

0

ಪಾಣಾಜೆ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆರ್ಲಪದವು ‌ಇದರ ಮಹಾಸಭೆಯು ಆ.9 ರಂದು ಪಾಣಾಜೆ ಸಿ.ಎ. ಬ್ಯಾಂಕ್ ಸಭಾಭವನದಲ್ಲಿ ಸಂಜೆ ನಡೆಯಿತು.

ಸಭೆಯಲ್ಲಿ 2023 ರ 34 ನೇ ವರ್ಷದ ಶಾರದೋತ್ಸವದ ಲೆಕ್ಕಪತ್ರ ಮಂಡನೆ ಮಾಡಲಾಯಿತು. 2024ರ 35 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಪುಷ್ಪರಾಜ ರೈ ಕೋಟೆ, ಉಪಾಧ್ಯಕ್ಷರಾಗಿ ರವಿಶಂಕರ್ ಶರ್ಮ ಬೊಳ್ಳುಕಲ್ಲು, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಬಲ್ಯಾಯ ಕೊಂದಲಡ್ಕ, ಜತೆ ಕಾರ್ಯದರ್ಶಿಯಾಗಿ ಸಂತೋಷ್ ರೈ ಗಿಳಿಯಾಲು, ಕೋಶಾಧಿಕಾರಿಯಾಗಿ ಉಪೇಂದ್ರ ಬಲ್ಯಾಯ ದೇವಸ್ಯ ಆಯ್ಕೆಯಾದರು. ನಂತರ ಕಾರ್ಯಕ್ರಮಗಳು ಮಾಡುವ ಬಗ್ಗೆ ಚರ್ಚೆ ಮಾಡಲಾಯಿತು.

ಸಭೆಯಲ್ಲಿ ಡಾ. ಅಖಿಲೇಶ್ ಭಟ್ ಅರ್ಧಮೂಲೆ, ಸದಾಶಿವ ರೈ ಸೂರಂಬೈಲು, ರಮಾನಾಥ ರೈ ಪಡ್ಯಂಬೆಟ್ಟು, ರವೀಂದ್ರ ಭಂಡಾರಿ ಪಾಣಾಜೆ, ಉಮೇಶ್ ರೈ ಗಿಳಿಯಾಲು, ಮೋಹನ್ ತೂಂಬಡ್ಕ, ರಘುನಾಥ ಪಾಟಾಳಿ ಅಪಿನಿಮೂಲೆ, ಪದ್ಮನಾಭ ರೈ ಸೂರಂಬೈಲು, ಸುಭಾಸ್ ರೈ ಚಂಬರಕಟ್ಟ, ಜಯರಾಮ ರೈ ಚಂಬರಕಟ್ಟ, ಪ್ರಿತೇಶ್ ವಾಣಿಯನ್ ಸುಡುಕುಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here