ಪುತ್ತೂರು ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ಅಸ್ತಿತ್ವಕ್ಕೆ ಅಧ್ಯಕ್ಷರಾಗಿ ಡಾ.ಝೈನಿ, ಪ್ರ.ಕಾರ್ಯದರ್ಶಿ ಅಝೀಝ್ ಮಿಸ್ಬಾಹಿ, ಕೋಶಾಧಿಕಾರಿಯಾಗಿ ಯೂಸುಫ್ ಗೌಸಿಯ

0

ಪುತ್ತೂರು: ಪುತ್ತೂರು ಸುನ್ನೀ ಸಂಯುಕ್ತ ಜಮಾಅತ್ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದ್ದು ಸಮಿತಿಯ ಅಧ್ಯಕ್ಷರಾಗಿ ಡಾ ಎಮ್ಮೆಸ್ಸೆಂ. ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ ಹಾಗೂ ಕೋಶಾಧಿಕಾರಿಯಾಗಿ ಯೂಸುಫ್ ಗೌಸಿಯಾ ಸಾಜ ಆಯ್ಕೆಯಾಗಿದ್ದಾರೆ.
ಪುತ್ತೂರು ಪ್ರೆಸ್ಟೀಜ್ ಸಭಾಂಗಣದಲ್ಲಿ ನಡೆದ ಪುತ್ತೂರು ತಾಲೂಕಿನ ವಿವಿಧ ಮೊಹಲ್ಲಾಗಳ ಪ್ರತಿನಿಧಿಗಳ ಸಮಾವೇಶದಲ್ಲಿ ಸಮಿತಿಯನ್ನು ರಚಿಸಲಾಯಿತು.

ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ ಹಸನ್‌ನಗರ, ಸಿ ಎಂ ಅಬೂಬಕರ್ ಕರ್ನೂರು, ಕಾರ್ಯದರ್ಶಿಗಳಾಗಿ ಅಬೂಶಝ ಅಬ್ದುಲ್ ರಝಾಖ್ ಖಾಸಿಮಿ ಕೂರ್ನಡ್ಕ, ಸ್ವಾಲಿಹ್ ಮುರ, ಸಂಚಾಲಕರಾಗಿ ದಾವೂದ್ ಅಶ್ರಫಿ ಅಳಕೆಮಜಲು ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಲಾಹುದ್ದೀನ್ ಸಖಾಫಿ ಮಾಡನ್ನೂರು, ಇಕ್ಬಾಲ್ ಬಪ್ಪಳಿಗೆ, ಸಲೀಂ ಸಅದಿ ಕಾರ್ಯಾಡಿ, ಅಬ್ದುಲ್ ಹಮೀದ್ ಕೊಯಿಲ, ಯೂಸುಫ್ ಬೀಟಿಗೆ, ಹಸೈನಾರ್ ಹಸನ್‌ನಗರ, ಆದಂ ಕೆ. ಪಿ, ಸುಲೈಮಾನ್ ಮಿಸ್ಬಾಹಿ, ಕೆ ಎಚ್ ಇಸ್ಮಾಯಿಲ್ ಕುಕ್ಕಾಜೆ, ಎ ಎಂ ರಫೀಕ್, ಜಲೀಲ್ ಸಖಾಫಿ ಕರ್ನೂರು, ರವೂಫ್ ಹಾಶಿಮಿ ಮೈದಾನಿಮೂಲೆ, ಬಿ ಎ ಹಮೀದ್ ಬೀಟಿಗೆ, ಕೆ ಯೂಸುಫ್ ಕರಿಮಜಲ್, ಅಬ್ದುಲ್ ಮಜೀದ್ ಬನ್ನೂರು, ಟಿ ಮುಹಮ್ಮದ್ ಕಾರ್ಯಾಡಿ, ಮುಹಮ್ಮದ್ ಕುಂಞಿ ಹಸನ್‌ನಗರ, ಮುಹಮ್ಮದ್ ಹಾಜಿ ಸಾರ್ಯ, ಇಬ್ರಾಹಿಂ ಝುಹ್ರಿ ಕುಕ್ಕಾಜೆ, ಶರೀಫ್ ಸಖಾಫಿ ಅಳಕೆಮಜಲು, ಉಮರ್ ಫಾರೂಕ್ ಬುಳೆರಿಕಟ್ಟೆ, ಅಬ್ದುಲ್ಲ ಕುಂಞಿ ಸಾರ್ಯ, ಅಬೂಬಕರ್ ನರಿಮೊಗರು, ಶಾಹುಲ್ ಹಮೀದ್ ಕಬಕ, ಅಬ್ದುಲ್ಲಾ ಮುಸ್ಲಿಯಾರ್ ಬನ್ನೂರ್, ಎ ಕೆ ಅಬ್ದುಲ್ ಹಮೀದ್ ಸಾಜ ಅವರನ್ನು ಆಯ್ಕೆ ಮಾಡಲಾಯಿತು.
ಸಲಹೆಗಾರರಾಗಿ ಸಯ್ಯಿದ್ ಅಬ್ದುಲ್ ರಹ್ಮಾನ್ ಮಸ್‌ಊದ್ ಅಲ್ ಬುಖಾರಿ ಕೂರತ್, ಬಿ. ಕೆ. ಮುಹಮ್ಮದ್ ಅಲಿ ಫೈಝಿ ಸಂಪ್ಯ, ಹಂಝ ಮುಸ್ಲಿಯಾರ್ ಈಶ್ವರಮಂಗಲ, ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅವರನ್ನು ಆಯ್ಕೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ಸಯ್ಯಿದ್ ಶಿಹಾಬುದ್ದೀನ್ ಮದಕ ತಂಙಳ್ ದುವಾ ನೆರವೇಸಿದರು.

ಪುತ್ತೂರು ಝೋನ್ ಸುನ್ನಿ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಹಂಝ ಮುಸ್ಲಿಯಾರ್ ಈಶ್ವರಮಂಗಲ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಂಎ ರಾಜ್ಯ ಕೋಶಾಧಿಕಾರಿ ಅಬ್ದುಲ್ ಹಮೀದ್ ಹಾಜಿ ಕೊಡುಂಗಾಯಿ ಉದ್ಘಾಟಿಸಿದರು. ಎಸ್‌ವೈಎಸ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಲ, ಅಬೂಶಝ ಖಾಸಿಮಿ, ಅಬ್ದುಲ್ ಹಮೀದ್ ಸಖಾಫಿ ಪಾಡಿ, ಅಬ್ದುಲ್ ಖಾದರ್ ಸಖಾಫಿ ಕಡಂಬು ಶುಭ ಹಾರೈಸಿದರು. ಜಿ ಎಂ ಅಬೂಬಕರ್ ಫೈಝಿ ಸುನ್ನಿ ಪೆರುವಾಯಿ ವಂದಿಸಿದರು.

LEAVE A REPLY

Please enter your comment!
Please enter your name here