ಸುದ್ದಿಬಿಡುಗಡೆ ಕಚೇರಿ ವ್ಯವಸ್ಥಾಪಕ ಚಂದ್ರಶೇಖರ್‌ರವರಿಗೆ ಸುದ್ದಿ ಬಳಗದಿಂದ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಆ.6ರಂದು ನಿಧನರಾದ ಸುದ್ದಿ ಬಿಡುಗಡೆ ಪತ್ರಿಕಾ ಕಚೇರಿ ವ್ಯವಸ್ಥಾಪಕ ಚಂದ್ರಶೇಖರ ಉಮಿಗದ್ದೆಯವರಿಗೆ ಶ್ರದ್ಧಾಂಜಲಿ ಸಭೆಯು ಆ.21ರಂದು ಪತ್ರಿಕಾ ಕಚೇರಿಯಲ್ಲಿ ನಡೆಯಿತು.


ನುಡಿ ನಮನ ಸಲ್ಲಿಸಿದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ ಅವರು, ಪತ್ರಿಕೆಯ ಪ್ರಾರಂಭದಿಂದಲೇ ಸಂಸ್ಥೆಯಲ್ಲಿ ಕೆಲಸ ಮಾಡಿರುವ ಚಂದ್ರಶೇಖರ್ ಅವರು ಸೀಮಿತ ಸಿಬ್ಬಂದಿಗಳಿರುವಾಗಲೂ ಸಂಸ್ಥೆಯನ್ನು ಕಷ್ಟದಲ್ಲಿ ಮುನ್ನಡೆಸಿದ್ದರು. ಪತ್ರಿಕೆಯಲ್ಲಿ ಜಾಹೀರಾತು, ಮುದ್ರಣ, ವಿತರಣೆ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡಿದ್ದರು. ಸಂಸ್ಥೆಯ ಆರ್ಥಿಕ ಜವಾಬ್ದಾರಿ ಹೊತ್ತವರು. ಬೆಳಿಗ್ಗೆ ಕಚೇರಿಗೆ ಬಂದರೆ ಪತ್ರಿಕೆ ಮುದ್ರಣವಾದ ಬಳಿಕ ಮನೆಗೆ ತೆರಳುತ್ತಿದ್ದರು. ಸಂಸ್ಥೆಗಾಗಿ ಪ್ರಾಮಾಣಿಕತೆಯಿಂದ ಬಿಡುವಿಲ್ಲದೇ ಕೆಲಸ ನಿರ್ವಹಿಸಿದವರು. ಗೆಡ್ಡೆಯ ಶಸ ಚಿಕಿತ್ಸೆಯಾದ ಬಳಿಕ ಧ್ವನಿ ಇಲ್ಲದಿದ್ದರೂ ಕಚೇರಿಯ ಜವಾಬ್ದಾರಿ ನಿರ್ವಹಿಸಿದವರು. ತನ್ನ ಸಂಬಂಧಿಕರೊಬ್ಬರು ಸುದ್ದಿಯೊಂದಿಗೆ ವಿರೋಧ ಕಟ್ಟಿಕೊಂಡಾಗ ಸುದ್ದಿಯ ಪರವಾಗಿ ನಿಂತು ಸಂಪೂರ್ಣ ಬೆಂಬಲ ನೀಡಿದ್ದರು. ಸಂಸ್ಥೆಗೆ ಯಾವುದೇ ರೀತಿಯಲ್ಲಿಯೂ ನಷ್ಟ ಆಗದಂತೆ ಶ್ರಮಿಸಿದವರು. ಕಚೇರಿಗೆ ಸಂಬಂಧಿಸಿದ ಎಲ್ಲಾ ವಿಭಾಗಗಳ ನಿರ್ವಹಣೆ ಮಾಡುತ್ತಿದ್ದರು. ಕೊನೇ ಕ್ಷಣದ ತನಕವೂ ಸಂಸ್ಥೆಗಾಗಿ ಕೆಲಸ ಮಾಡಿದವರು. ಸಂಸ್ಥೆಯಲ್ಲಿ ಪ್ರಾಮಾಣಿಕತೆಯಿಂದ ಅತ್ಯಂತ ವಿಶ್ವಾಸನೀಯ ವ್ಯಕ್ತಿಯಾಗಿ ಎಲ್ಲರೊಂದಿಗೆ ಅನ್ಯೋನ್ಯತೆಯಿಂದ ಕೆಲಸ ಮಾಡಿದ್ದ ಅವರು ಸಂಸ್ಥೆಗೆ ಓರ್ವ ಮಾದರಿ ವ್ಯಕ್ತಿಯಾಗಿದ್ದರು ಎಂದರು.


ಸಿಇಓ ಸೃಜನ್ ಊರುಬೈಲು, ಸಂಸ್ಥೆಯ ಸಿಬ್ಬಂದಿಗಳಾದ ಶೈಲಜಾ ಸುದೇಶ್, ರಾಜೇಶ್ ಎಂ.ಎಸ್., ಉಮೇಶ್ ಮಿತ್ತಡ್ಕ, ಶ್ರೀಧರ ರೈ, ನರೇಶ್ ಜೈನ್, ಮೋಹನ್ ಶೆಟ್ಟಿ, ಲೋಕೇಶ್ ಬನ್ನೂರು ಮಾತನಾಡಿ ಶ್ರದ್ಧಾಂಜಲಿ ಅರ್ಪಿಸಿದರು. ಚಂದ್ರಶೇಖರ ಅವರ ಪುತ್ರ ರೋಹಿತ್, ಕಚೇರಿ ಸಿಬ್ಬಂದಿಗಳು ಹಾಗೂ ಪ್ರತಿನಿಽಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here