ನೆ. ಮುಡ್ನೂರು ಗ್ರಾ. ಪಂ. ನಲ್ಲಿ ಪಂಪ್ ಸೆಟ್ ಆಧಾರ್ ಜೋಡಣೆ ಶಿಬಿರ

0

ಪುತ್ತೂರು:ಕೆ.ಇ.ಆರ್.ಸಿ. ಹಾಗೂ ರಾಜ್ಯ ಸರಕಾರದ ಆದೇಶದಂತೆ ಮೆಸ್ಕಾಂ ಇಲಾಖೆಯ ಎಲ್ಲಾ ಕೃಷಿ ನೀರಾವರಿಯ ಪಂಪ್‌ಸೆಟ್‌ಗಳಿಗೆ ಸಹಾಯಧನವನ್ನು ಮುಂದುವರಿಸಲು ಆಧಾರ್ ಕಾರ್ಡ್ ಜೋಡಾವಣೆ ಕಡ್ಡಾಯಗೊಳಿಸಿದ್ದು ರೈತರ ಅನುಕೂಲಕ್ಕಾಗಿ ಮೆಸ್ಕಾಂ ಕುಂಬ್ರ ಉಪವಿಭಾಗ ವ್ಯಾಪ್ತಿಯ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಒಂದು ದಿನದ ವಿಶೇಷ ಶಿಬಿರ ನಡೆಯಿತು.


ಮೆಸ್ಕಾಂ ಈಶ್ವರಮಂಗಲದ ಜೆಇಇ ರಮೇಶ್ ಕೆ, ಕುಂಬ್ರ ಮೆಸ್ಕಾಂ ಸಿಬ್ಬಂದಿಗಳಾದ ಅಶ್ವಿನಿ, ಯಶೋದ, ಗೀತಾ, ರೋಹಿತ್, ಕೇಶವ, ಲೈನ್ ಮಾನ್ ಪಾಂಡು ಹಾಗೂ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು‌.

LEAVE A REPLY

Please enter your comment!
Please enter your name here