ಪ್ರಪ್ರಥಮ ಬಾರಿಗೆ ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ವರಮಹಾಲಕ್ಷ್ಮೀ ಪೂಜೆ | 300ಕ್ಕೂ ಮಿಕ್ಕಿ ವರಮಹಾಲಕ್ಷ್ಮೀ ಪೂಜೆಯ ಪ್ರಸಾದ ವಿತರಣೆ

0

ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಆ.23ರಂದು ವರಮಹಾಲಕ್ಷ್ಮೀ ಪೂಜೆ ನಡೆಯಿತು.

ಶ್ರಾವಣ ಮಾಸದ ಮೂರನೇ ಶುಕ್ರವಾರದ ಪ್ರಯುಕ್ತ ಸಂಜೆ ವರಮಹಾಲಕ್ಷ್ಮೀ ಪೂಜೆ ಪ್ರಾರಂಭಗೊಂಡು ಮಹಾಪೂಜೆ ನಡೆದು ರಾತ್ರಿ 7ರಿಂದ ಎಸ್.ಎಲ್.ವಿ.ಟಿ. ಮಹಿಳಾ ಭಜಕ ವೃಂದದವರಿಂದ ಭಜನೆ, ರಾತ್ರಿ 8ಕ್ಕೆ ಶಾರದಾ ಮಾತೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. 300ಕ್ಕೂ ಮಿಕ್ಕಿ ವರಮಹಾಲಕ್ಷ್ಮೀ ಪೂಜೆಯ ಪ್ರಸಾದ ವಿತರಣೆಯಾಯಿತು.

ಮಂದಿರದ ಅರ್ಚಕ ಹರಿಪ್ರಸನ್ನ ಸರೋಳಿತ್ತಾಯ, ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಗೌರವಾಧ್ಯಕ್ಷ ಉದ್ಯಮಿ, ಸೀತಾರಾಮ ರೈ ಕೆದಂಬಾಡಿಗುತ್ತು, ಉಪಾಧ್ಯಕ್ಷ ಯಶವಂತ ಆಚಾರ್ಯ, ಕಾರ್ಯದರ್ಶಿ ಜಯಂತ ಉರ್ಲಾಂಡಿ, ಜತೆ ಕಾರ್ಯದರ್ಶಿಗಳಾದ ಸುಧೀರ್ ಕಲ್ಲಾರೆ, ಜಲಜಾಕ್ಷಿ ಹೆಗ್ಡೆ, ಕೋಶಾಧಿಕಾರಿ ತಾರನಾಥ್ ಹೆಚ್, ಸದಸ್ಯರುಗಳಾದ ದೇವಾಲಯಗಳ ಅಧ್ಯಯನಕಾರ ಚಂದ್ರಶೇಖರ ರಾವ್‌ ಪಿ.ಜಿ., ರಾಜೇಶ್‌ ಬನ್ನೂರು, ರಮಾನಂದ ರಾವ್, ಫಕೀರ ಗೌಡ, ಶ್ರೀಧರ ಆಚಾರ್ಯ, ಗುಲಾಬಿ ಗೌಡ, ಪುಷ್ಪರಾಜ್ ಹೆಗ್ಡೆ, ಜಯಕಿರಣ್ ಉರ್ಲಾಂಡಿ, ಗೋಪಾಲ ಆಚಾರ್ಯ, ಯೋಗಾನಂದ ರಾವ್‌, ಕೃಷ್ಣ ಪುತ್ತೂರು, ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯಕರಸೇವಕರ ತಂಡದ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here