ನರೇಂದ್ರ ಪ.ಪೂ.ಕಾಲೇಜಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ-ವಿಶೇಷ ಉಪನ್ಯಾಸ ಕಾರ‍್ಯಕ್ರಮ

0

ಪುತ್ತೂರು: ಶ್ರೀಕೃಷ್ಣ ಜನ್ಮಾಷ್ಟಮಿ ಕೇವಲ ಧಾರ್ಮಿಕ ಹಬ್ಬವಲ್ಲ. ಇದು ಜೀವನ, ಪ್ರೀತಿ ಮತ್ತು ದೈವಿಕ ಮತ್ತು ಭಕ್ತನ ನಡುವಿನ ಶಾಶ್ವತ ಬಂಧದ ಆಚರಣೆಯಾಗಿದೆ. ಭಗವಾನ್ ಶ್ರೀಕೃಷ್ಣ ಸಾರುವ ಕರ್ಮ, ಭಕ್ತಿ ಮತ್ತು ಧರ್ಮದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವ ಆಚರಣೆಯಾಗಿದೆ. ಈ ಹಬ್ಬವು ಆಧ್ಯಾತ್ಮಿಕ ಬೆಳವಣಿಗೆ ಮತ್ತು ಆಂತರಿಕ ಸಂತೋಷಕ್ಕೆ ಆಳವಾದ ಅವಕಾಶವನ್ನು ನೀಡುತ್ತದೆ. ದುಷ್ಟತನವನ್ನು ನಿರ್ಮೂಲನೆ ಮಾಡುವ ಮತ್ತು ಧರ್ಮವನ್ನು ಸ್ಥಾಪಿಸುವ ದೈವಿಕ ಧ್ಯೇಯವನ್ನು ಗೌರವಿಸಲು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಎಂದು ವಿದ್ಯಾಸರಸ್ವತಿ ಶಿಶುಮಂದಿರ ಬೇರಿಕೆ ಇದರ ಆಡಳಿತ ಮಂಡಳಿಯ ಸದಸ್ಯರಾದ ಪವಿತ್ರಾ ವಿಜಯ್ ಕುಂಬಾಡಿ ಇವರು ಹೇಳಿದರು. ನರೇಂದ್ರ ಪ.ಪೂ.ಕಾಲೇಜಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.

ಜನ್ಮಾಷ್ಟಮಿಯ ಆಚರಣೆಯು ವ್ಯಾಪಕವಾದ ಪದ್ಧತಿಗಳು ಮತ್ತು ಆಚರಣೆಗಳಿಂದ ಗುರುತಿಸಲ್ಪಟ್ಟಿದೆ, ಇದು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ಉಪವಾಸದಿಂದ ಹಿಡಿದು ಹಬ್ಬದವರೆಗೆ, ಶಾಂತ ಪ್ರಾರ್ಥನೆಗಳಿಂದ ಹಿಡಿದು ಸಾರ್ವಜನಿಕ ಪ್ರದರ್ಶನಗಳವರೆಗೆ, ಜನ್ಮಾಷ್ಟಮಿಯ ಪ್ರತಿಯೊಂದು ಅಂಶವು ಭಕ್ತಿ ಮತ್ತು ಸಂತೋಷದಿಂದ ತುಂಬಿರುತ್ತದೆ.ಇದು ದೈವಿಕ ಮಗುವನ್ನು ತಮ್ಮ ಜೀವನದಲ್ಲಿ ಸ್ವಾಗತಿಸಲು ಭಕ್ತರ ಸಿದ್ಧತೆಯನ್ನು ಸಂಕೇತಿಸುತ್ತದೆ.ಎಂದು ಹೇಳಿದರು.

ಶ್ರಾವಣ ಮಾಸದಲ್ಲಿ ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸುವ ಹಬ್ಬ ಎಂದರೆ ಶ್ರೀಕೃಷ್ಣ ಜನ್ಮಾಷ್ಟಮಿ .ಆ ಪ್ರಯುಕ್ತನರೇಂದ್ರ ಪ.ಪೂ.ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳಾದ ಮಡಿಕೆ ಒಡೆಯುವುದು, ಹಗ್ಗ-ಜಗ್ಗಾಟ, ಸ್ಪರ್ಧೆಗಳನ್ನು ಆಯೋಜಿಸಲಾಯಿತು.ಉಪನ್ಯಾಸಕರ ನೇತೃತ್ವದಲ್ಲಿ ಈ ಎಲ್ಲಾ ಆಟಗಳು ನಡೆಯಿತು.ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ,ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದ ಮತ್ತು ಎಲ್ಲಾ ವಿದ್ಯಾರ್ಥಿಗಳು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಕಾರ‍್ಯಕ್ರಮದಲ್ಲಿ ಪ್ರಥಮ ವಿಜ್ಞಾನ ವಿಭಾಗದ ಅರ್ಚನಾ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here