ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಮೇದಪ್ಪ ಗೌಡ ರವರಿಗೆ ಬೀಳ್ಕೊಡುಗೆ,ಸನ್ಮಾನ

0

ಕಡಬ: ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಡಬ,ಮರ್ಧಾಳ, ನೂಜಿಬಾಳ್ತಿಲ ಶಾಖೆಗಳಲ್ಲಿ ಸುಮಾರು 40 ವರ್ಷ ಜವಾನರಾಗಿ ಸೇವೆ ಸಲ್ಲಿಸಿ ಆ.31ರಂದು ವಯೋ ನಿವೃತ್ತಿಯಾದ ಮೇದಪ್ಪ ಗೌಡರವರಿಗೆ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ವತಿಯಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ಆ.31ರಂದು ಕೇಂದ್ರ ಕಚೇರಿಯಲ್ಲಿ ನಡೆಯಿತು.


ಸಂಘದ ಅಧ್ಯಕ್ಷರಾದ ರಮೇಶ್ ಕಲ್ಪುರೆ ಮತ್ತು ಉಪಾಧ್ಯಕ್ಷರಾದ ಗಣೇಶ್ ಮೂಜೂರು ಅವರು ಮಾತನಾಡಿ,ಮೇದಪ್ಪರವರು ಸಂಘದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿ ಎಂಬುದು ಉದ್ಯೋಗದಲ್ಲಿ ಅನಿವಾರ್ಯವಾದರೂ ಅವರ ಸೇವೆ ಇನ್ನು ಮುಂದೆಯೂ ಸಮಾಜಕ್ಕೆ ಸಿಗುವಂತಾಗಲಿ ಎಂದು ಹೇಳಿ ಶುಭಹಾರೈಸಿದರು. ನಿವೃತ್ತ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಸುಂದರ ಕರ್ಕೇರ,ನಿವೃತ್ತ ಶಾಖಾವ್ಯವಸ್ಥಾಪಕರಾದ ಯೋಹನ್ನಾನ್ ಎ.ಯು. ಸಂದರ್ಭೋಚಿತವಾಗಿ ಮಾತನಾಡಿ ನಿವೃತ್ತರಿಗೆ ಶುಭಹಾರೈಸಿದರು.

ಸನ್ಮಾನ:
ನಿವೃತ್ತರಾದ ಮೇದಪ್ಪ ಗೌಡ ಅವರನ್ನು ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ವತಿಯಿಂದ ಶಾಲು ಹೊದಿಸಿ, ಹಣ್ಣಹಂಪಲು, ನೆನೆಪಿನ ಕಾಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕ ರಘುಚಂದ್ರ ಗೌಡ,ಸತೀಶ್ ಮೇಲಿನಮನೆ,ಸದಾನಂದ ನಾಯ್ಕ ,ಬಾಬು ಮುಗೇರ,ಕೃಷ್ಣಪ್ಪ ಮಡಿವಾಳ,ಉಮೇಶ್,ಯಶೋದಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಾಲಕೃಷ್ಣ ಜಿ ಸ್ವಾಗತಿಸಿದರು ,ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಸುಧಾಕರ ಎಸ್ ವಂದಿಸಿದರು.

LEAVE A REPLY

Please enter your comment!
Please enter your name here