ನರಿಮೊಗರು ಗ್ರಾ.ಪಂ ಮಾಜಿ ಸದಸ್ಯ, ಎಪಿಎಂಸಿ ಮಾಜಿ ನಿರ್ದೇಶಕ ನಾಗೇಶ್ ನಾಯ್ಕ್ ಸೇರಾಜೆ ನಿಧನ

0

ಪುತ್ತೂರು:ನರಿಮೊಗರು ಗ್ರಾಮದ ಸೇರಾಜೆ ರಾಮಣ್ಣ ನಾಯ್ಕ್ ರವರ ಪುತ್ರ, ನರಿಮೊಗರು ಗ್ರಾ.ಪಂ ಮಾಜಿ ಸದಸ್ಯರು, ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾಗಿದ್ದ ನಾಗೇಶ್ ನಾಯ್ಕ್(63ವ.)ರವರು ಅಸೌಖ್ಯದಿಂದ ಸೆ.6ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ನರಿಮೊಗರಿನಲ್ಲಿ ಅನುಗ್ರಹ ಸ್ಟೋರ‍್ಸ್ ಅಂಗಡಿ ಹಾಗೂ ಬೀಡಿ ಬ್ರಾಂಚ್ ನಡೆಸುತ್ತಿದ್ದರು. ಇವರು ಎಪಿಎಂಸಿ ಮಾಜಿ ನಿರ್ದೇಶಕ, ನರಿಮೊಗರು ಗ್ರಾ.ಪಂ ಮಾಜಿ ಸದಸ್ಯ, ಮುಂಡೂರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರು ಸೇರಿದಂತೆ ವಿವಿಧ ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಚಿರಪರಿಚಿತರಾಗಿದ್ದರು. ಮೃತರ ಮನೆ ವಿವಿಧ ರಾಜಕೀಯ ಪಕ್ಷಗ ನಾಯಕರು, ಜನಪ್ರತಿನಿಧಿಗಳು ಆಗಮಿಸಿ ಸಂತಾಪ ಸೂಚಿಸಿದರು.

ಮೃತರು ಪತ್ನಿ ಆಶಾ, ಸಹೋದರರಾದ ಸಂಜೀವ ನಾಯ್ಕ್, ಗಂಗಾಧರ ನಾಯ್ಕ್, ಕುರುಣಾಕರ ನಾಯ್ಕ್, ಪ್ರವೀಣ್ ನಾಯ್ಕ್ ಹಾಗೂ ಸಹೋದರಿ ಪ್ರಭಾವತಿಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here