ಪುಣ್ಚಪ್ಪಾಡಿ ನೇರೋಳ್ತಡ್ಕದಲ್ಲಿ 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ-ವಿವಿಧ ಕ್ರೀಡಾಕೂಟ ,ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

0

ಸವಣೂರು : ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕ ವಿನಾಯಕನಗರದ ಗೌರಿಸದನದಲ್ಲಿ ಶ್ರೀಗೌರಿ ಗಣೇಶ ಉತ್ಸವ ಸಮಿತಿ ಇದರ ವತಿಯಿಂದ 36ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವವು ಸೆ.7ರಂದು ರಮೇಶ್‌ ಪುದ್ವುಣ್ಣಾಯ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಸೆ.7ರಂದು ಬೆಳಿಗ್ಗೆ  ಧ್ವಜಾರೋಹಣವನ್ನು ಪ್ರಗತಿ ಪರ ಕೃಷಿಕ ಮಂಜಪ್ಪ ಶೆಟ್ಟಿ ನೂಜಾಜೆ ನೆರವೇರಿಸಿದರು.ಬಳಿಕ ಶ್ರೀಗಣಪತಿ ದೇವರ ಮೂರ್ತಿ ಪ್ರತಿಷ್ಠಾಪನೆ , ಪುಣ್ಚಪ್ಪಾಡಿ ಶ್ರೀ ಕೃಷ್ಣಾರ್ಪಿತ ಭಜನಾ ಮಂಡಳಿ ಹಾಗೂ ದೇವಸ್ಯ ಶ್ರೀಹರಿಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ,ಗಣಹೋಮ ನಡೆಯಿತು.

ಬಳಿಕ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀಗೌರಿ ಗಣೇಶ ಉತ್ಸವ ಸಮಿತಿಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ವಹಿಸಿದ್ದರು.ಶ್ರೀ ಕ್ಷೇ.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಧಾರ್ಮಿಕ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಹಾವೇರಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಪ್ರದೀಪ್ ಕುಮಾರ್ ಜೆ.ನಾಯ್ಕ, ನಿವೃತ್ತ ಸೈನಿಕ ಪ್ರವೀಣ್ ರೈ ನೂಜಾಜೆ ,ಸವಣೂರು ಗ್ರಾ.ಪಂ.ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು ,ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ ರೈ ದೇವಸ್ಯ,ಪುಣ್ಚಪ್ಪಾಡಿ ಶ್ರೀ ಗೌರಿ ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಸಚಿನ್ ಕುಮಾರ್ ಜೈನ್ ,ಶ್ರೀಗೌರಿ ಗಣೇಶ ಉತ್ಸವ ಸಮಿತಿಯ ಉಪಾಧ್ಯಕ್ಷ ವಸಂತ ಗೌಡ ಬೆದ್ರಂಪಾಡಿ,ಕಾರ್ಯದರ್ಶಿ ಪ್ರಮೋದ್ ಬೊಳ್ಳಾಜೆ,ಹೊಸಗದ್ದೆ ವಿಸರ್ಜನಾ ಕಟ್ಟೆ ಸಮಿತಿಯ ಅಧ್ಯಕ್ಷ 

ಕುಶಾಲಪ್ಪ ಗೌಡ  ತುಂಬೆತಡ್ಕ,ಪ್ರಗತಿಪರ ಕೃಷಿಕ ಮಂಜಪ್ಪ ಶೆಟ್ಟಿ ನೂಜಾಜೆ ಉಪಸ್ಥಿತರಿದ್ದರು.ಅಖಿಲಾ ನೆಕ್ರಾಜೆ ಪ್ರಾರ್ಥಿಸಿದರು.ಶ್ರೀಗೌರಿ ಗಣೇಶ ಉತ್ಸವ ಸಮಿತಿಯ ಅಧ್ಯಕ್ಷ ಮಹೇಶ್ ಕೆ.ಸವಣೂರು ಸ್ವಾಗತಿಸಿದರು. ಶೀನಪ್ಪ ಶೆಟ್ಟಿ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ 
ಕಾರ್ಯಕ್ರಮದಲ್ಲಿ ಪುಣ್ಚಪ್ಪಾಡಿ ಗ್ರಾಮದ ಸಾಧಕ ಎಸ್ಸೆಸೆಲ್ಸಿ ,ಪಿಯುಸಿ,ಪದವಿ,ಸ್ನಾತಕೋತ್ತರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಿತು.

ನವಜೀವನ ಸದಸ್ಯರಿಗೆ ಗೌರವಾರ್ಪಣೆ
ಪುಣ್ಚಪ್ಪಾಡಿ ನೇರೋಳ್ತಡ್ಕ ಗೌರಿಸದನದಲ್ಲಿ ನಡೆದಿದ್ದ ಮದ್ಯವರ್ಜನಾ ಶಿಬಿರದಲ್ಲಿ ಪಾಲ್ಗೊಂಡು ವ್ಯಸನಮುಕ್ತರಾದ ನವಜೀವನ ಸಮಿತಿ ಸದಸ್ಯರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಮಧಾಹ್ನ ಶ್ರೀಮಹಾಗಣಪತಿ ದೇವರ ಮಹಾಪೂಜೆ ,ಬಳಿಕ ಪ್ರಸಾದ ವಿತರಣೆ,ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ  ಶ್ರೀಮಹಾಗಣಪತಿ ದೇವರ ಮಹಾಪೂಜೆ ನಡೆದು ಶ್ರೀಗಣಪತಿ ದೇವರಮೂರ್ತಿ ವಿಸರ್ಜನಾ ಶೋಭಾಯಾತ್ರೆ ನಡೆದು ಬಳಿಕ ಹೊಸಗದ್ದೆ ಗೌರಿ ಹೊಳೆಯಲ್ಲಿ ಗಣಪತಿ ದೇವರ ಮೂರ್ತಿಯ ಜಲಸ್ತಂಬನ ನಡೆಯಿತು.

ಕ್ರೀಡಾಕೂಟ
ಶ್ರೀಗಣೇಶೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕ್ರೀಡಾಕೂಟ ನಡೆಯಿತು.ಸಾರ್ವಜನಿಕರಿಗೆ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ 3500 ನಗದು ಹಾಗೂ ಟ್ರೋಫಿ,ದ್ವಿತೀಯ 2500 ನಗದು ಹಾಗೂ ಟ್ರೋಫಿ, ಕಾಲೇಜು ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ 2000 ನಗದು ಹಾಗೂ ಟ್ರೋಫಿ ,ದ್ವಿತೀಯ 1500 ನಗದು ಹಾಗೂ ಟ್ರೋಫಿ, ಪುರುಷರ ಹಗ್ಗಜಗ್ಗಾಟದಲ್ಲಿ ಪ್ರಥಮ 2000 ನಗದು ಹಾಗೂ ಟ್ರೋಫಿ ,ದ್ವಿತೀಯ 1500 ನಗದು ಹಾಗೂ ಟ್ರೋಫಿ.ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಥಮ 1500 ನಗದು ಹಾಗೂ ಟ್ರೋಫಿ ,ದ್ವಿತೀಯ 1000 ನಗದು ಹಾಗೂ ಟ್ರೋಫಿ,ಪುರುಷರ ವಿಭಾಗದ ಅಡ್ಡಕಂಬ ಸ್ಪರ್ಧೆಯ ವಿಜೇತರಿಗೆ 1000 ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರಿಗೆ ಭಕ್ತಿಗೀತೆ ,ಸಂಗೀತ ಕುರ್ಚಿ,ಗೋಣಿಚೀಲ ಓಟ ,ಪುರುಷರಿಗೆ ಮತ್ತು ಮಹಿಳೆಯರಿಗೆ ಮಡಕೆ ಒಡೆಯುವ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಗೌರಿ ಗಣೇಶ ಉತ್ಸವ ಸಮಿತಿಯ ಉಪಾಧ್ಯಕ್ಷೆ  ವೇದಾವತಿ ಅಂಜಯ, ಜೊತೆ ಕಾರ್ಯದರ್ಶಿ  ನಿತಿನ್ ಪೂಜಾರಿಮೂಲೆ,ಕೋಶಾಧಿಕಾರಿ ಯತೀಶ್ ಕುಮಾರ್ ಕೊಂಬಕೆರೆ, ಜತೆ ಕೋಶಾಧಿಕಾರಿ ಪ್ರತೀಕ್ ಬೆದ್ರಂಪಾಡಿ ಹಾಗೂ ಸದಸ್ಯರು ,ಶ್ರೀ ಗೌರಿ ಗಣೇಶ ಉತ್ಸವ ಸಮಿತಿ ಇದರ ಹೊಸಗದ್ದೆ ವಿಸರ್ಜನಾ ಕಟ್ಟೆ ಉಸ್ತುವಾರಿ ಸಮಿತಿ ಪದಾಧಿಕಾರಿಗಳು ,ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here