ಕಬಕ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ವಿನಯ ಕುಮಾರ್ ಕಲ್ಲೇಗ

0

ಪುತ್ತೂರು:ಪುತ್ತೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಕಬಕ ಗ್ರಾ.ಪಂ ಸದಸ್ಯ ವಿನಯ ಕುಮಾರ್ ಕಲ್ಲೇಗ ನೇಮಕಗೊಂಡಿದ್ದಾರೆ.


ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ನೇಮಕಗೊಳಿಸಿ ಘೋಷಣೆ ಮಾಡಿದ್ದಾರೆ.


ಕಬಕ ಗ್ರಾಮದ ಕಲ್ಲೇಗ ನಿವಾಸಿಯಾಗಿರುವ ವಿನಯ ಕುಮಾರ್, ಮುರ ಶಕ್ತಿ ಯುವಕ ಮಂಡಲದ ಮಾಜಿ ಅಧ್ಯಕ್ಷ, ಕಲ್ಲೇಗ ಮಾಡತ್ತಾರು ಪುಣ್ಯಕುಮಾರ ದೈವಸ್ಥಾನದ ದುರ್ಗಾಪೂಜಾ ಸಮಿತಿ ಮಾಜಿ ಅಧ್ಯಕ್ಷ, ಕಲ್ಲೇಗ ಗೌಡ ಯುವ ಸಂಘದ ಮಾಜಿ ಅಧ್ಯಕ್ಷ, ಕಬಕ ಗ್ರಾ.ಪಂ ಮಾಜಿ ಅಧ್ಯಕ್ಷರಾಗಿರುವ ಇವರು ಪ್ರಸ್ತುತ ಕಬಕ ಗ್ರಾ.ಪಂ ಸದಸ್ಯರಾಗಿರುತ್ತಾರೆ.

LEAVE A REPLY

Please enter your comment!
Please enter your name here