ಪೆರ್ನೆ ಗ್ರಾಮದ ಹನುಮಾಜೆ ನಿವಾಸಿ ಸತೀಶ್‌ ನಿಧನ

0

ಪೆರ್ನೆ:ಯುವಕನೋರ್ವ ಅನಾರೋಗ್ಯದಿಂದಾಗಿ ಮೃತಪಟ್ಟ ಘಟನೆ ಪೆರ್ನೆಯಲ್ಲಿ ಸೆ.12ರಂದು ನಡೆದಿದೆ.

ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಹನುಮಾಜೆ ನಿವಾಸಿ ಸತೀಶ್‌(26.ವ) ಎಂಬವರು ಮೃತಪಟ್ಟವರು.

ಘಟನೆ ವಿವರ:
ಕಳೆದ ಮೂರು ದಿನಗಳ ಹಿಂದೆ ಸತೀಶ್‌ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ನಿನ್ನೆ(ಸೆ.12) ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಆದರೆ ಅಲ್ಲಿ ವಿಪರೀತವಾಗಿ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಮಧ್ಯಾಹ್ನದ ವೇಳೆ ಹತ್ತಿರದ ಡಾಕ್ಟರ್‌ ಬಳಿ ಕರೆದುಕೊಂಡು ಹೋಗಲಾಯಿತು. ಅಲ್ಲಿ ಡಾಕ್ಟರ್‌ ಪರೀಕ್ಷಿಸಿದ ಬಳಿಕ ತಕ್ಷಣ ಪುತ್ತೂರಿನ ಮಹಾವೀರ ಆಸ್ಪತ್ರೆಗೆ ತೆರಳುವಂತೆ ಸೂಚನೆ ನೀಡಿದ್ದರು.ಅಲ್ಲಿಂದ ರಿಕ್ಷಾದ ಮೂಲಕ ಮಹಾವೀರ ಆಸ್ಪತ್ರೆಗೆ ತೆರಳಿ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ತಾಯಿ ಸುಮತಿ, ತಂಗಿ, ಅಣ್ಣ ರಾಜೇಶ್‌ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here