ಕರ್ನಾಟಕ ಗಮಕ ಕಲಾ ಪರಿಷತ್ ದ.ಕ.ಜಿಲ್ಲೆ, ಪುತ್ತೂರು ಘಟಕದ ವತಿಯಿಂದ ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮ

0

ಪುತ್ತೂರು: ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ ಸೆ.17ರಂದು ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.

ರಾಮಕುಂಜ ನಿವೃತ್ತ ಪ್ರಾಂಶುಪಾಲ, ಘಟಕದ ಅಧ್ಯಕ್ಷ ಪ್ರೊ. ವೇದವ್ಯಾಸ ಇವರ ಸ್ವಗೃಹ, ಪುತ್ತೂರಿನ ನೆಹರುನಗರದ ‘ಶ್ರೀಮಾ’ದಲ್ಲಿ ನಡೆದ ಅನಂತಪದ್ಮನಾಭ ವ್ರತದ ಸಮಾರೋಪ ಪೂಜಾಕಾರ್ಯದ ಅಂಗವಾಗಿ, ಗುರುಚರಿತಾಮೃತದಿಂದ ಆಯ್ದ ‘ಅನಂತಪದ್ಮನಾಭ ವ್ರತ ಮಹಾತ್ಮೆ’ ಎಂಬ ಕಥಾಭಾಗ ನಡೆಯಿತು.

ಗಮಕಿ ಮಂಜುಳಾ ಸುಬ್ರಹ್ಮಣ್ಯ ಭಟ್ ಗಮಕ ವಾಚನಗೈದರು. ಮುಳಿಯ ಶಂಕರ ಭಟ್ ಗಮಕ ವ್ಯಾಖ್ಯಾನಗೈದರು.

ಗಮಕ ಕಲಾ ಪರಿಷತ್ತು, ಬಂಟ್ವಾಳ ಘಟಕದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಸ್ವಾಗತಿಸಿ,ನಿವೃತ್ತ ಕನ್ನಡ ಪ್ರಾಚಾರ್ಯ ವಸಂತ ಕುಮಾರ್ ತಾಳ್ತಜೆ ವಂದಿಸಿದರು. ಕಿರುಕಾಣಿಕೆ ನೀಡಿ, ಶಾಲು ಹೊದಿಸಿ ಕಲಾವಿದರನ್ನು ಗೌರವಿಸಲಾಯಿತು.

ಗೌರವಾಧ್ಯಕ್ಷ ಭಾಸ್ಕರ ಬಾರ್ಯ, ಉಪಾಧ್ಯಕ್ಷ ಈಶ್ವರ ಭಟ್ ಗುಂಡ್ಯಡ್ಕ, ಕಾರ್ಯದರ್ಶಿ ಶಂಕರಿ ಶರ್ಮ, ಸದಸ್ಯರಾದ ಮಹಾಲಿಂಗ ಭಟ್, ಜಯಲಕ್ಷ್ಮಿ ವಿ.ಭಟ್ ಮತ್ತು ಆಗಮಿಸಿದ ಅತಿಥಿಗಳು ಹಾಗೂ ಮನೆಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here