ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ಸವಿ ನೆನಪಿನಗಾಗಿ ಚಾರ್ವಾಕದ ಬಾಂತೋಡಿನಲ್ಲಿ ನೂತನ ಮನೆ ನಿರ್ಮಾಣಕ್ಕೆ ಚಾಲನೆ

0

ಕಾಣಿಯೂರು: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ, ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರ, ಚಾರ್ವಾಕ ಶಕ್ತಿಕೇಂದ್ರ ಬೂತ್ ಸಂಖ್ಯೆ 61 ರ ನೇತೃತ್ವ ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಜನ್ಮದಿನದ ಪ್ರಯುಕ್ತ ,ಸೇವಾಪಾಕ್ಷಿಕ -2024 ರ ಅಂಗವಾಗಿ ಚಾರ್ವಾಕ ಗ್ರಾಮದ ಬಾಂತೋಡು ನಿವಾಸಿ ಪುಟ್ಟಣ್ಣ ದಂಪತಿಗಳಿಗೆ ನೂತನ ಮನೆ ನಿರ್ಮಾಣಕ್ಕೆ ಬಿ. ಜೆ. ಪಿ ಹಿರಿಯ ಕಾರ್ಯಕರ್ತ ಬೆಳಿಯಪ್ಪ ದೇವರಮಾರು ದೀಪ ಬೆಳಗಿಸಿ, ಜಿಲ್ಲಾ ಬಿ. ಜೆ. ಪಿ ಉಪಾಧ್ಯಕ್ಷರು,ಸೇವಾ ಪಾಕ್ಷಿಕದ ಜಿಲ್ಲಾ ಸಂಚಾಲಕ ರಾಕೇಶ್ ರೈ ಕೆಡೆಂಜಿ ಗುದ್ದಲಿಪೂಜೆ ಮಾಡಿ ಸೆ 22 ರಂದು ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ದಿನೇಶ್ ಮೆದು, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಂದಿರಾ ಬಿ. ಕೆ, ಮಂಡಲ ಕಾರ್ಯದರ್ಶಿ ಗಣೇಶ್ ಉದನಡ್ಕ, ಮಂಡಲ ಸಮಿತಿ ಸದಸ್ಯರಾದ ತಾರನಾಥ ಕಾಯರ್ಗ, ಧನಂಜಯ ಕೇನಾಜೆ, ಚಾರ್ವಾಕ ಶಕ್ತಿ ಕೇಂದ್ರ ಪ್ರಮುಖ್ ಸತ್ಯನಾರಾಯಣ ಕಲ್ಲೂರಾಯ, ಪುಣ್ಚಪಾಡಿ ಶಕ್ತಿ ಕೇಂದ್ರ ಪ್ರಮುಖ್ ಮಹೇಶ್ ಕೆ, ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ, ಶ್ರೀ ಕಪಿಲೇಶ್ವರ ದೇವಾಲಯ ಚಾರ್ವಾಕ ಇದರ ವ್ಯವಸ್ಥಾಪನ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೊರಗಪ್ಪ ಕುಕ್ಕುನಡ್ಕ,, ಚಾರ್ವಾಕ ಬೂತ್ ಸಮಿತಿ ಅಧ್ಯಕ್ಷ ವಿಶ್ವನಾಥ ದೇವಿನಗರ, ನಾಣಿಲ ಬೂತ್ ಸಮಿತಿ ಅಧ್ಯಕ್ಷ ವಿಶ್ವನಾಥ ಖಂಡಿಗ, ಚಾರ್ವಾಕ ಸಿ. ಎ ಬ್ಯಾಂಕ್ ನಿರ್ದೇಶಕರಾದ ಪರಮೇಶ್ವರ ಅನಿಲ, ಸುಂದರ ದೇವಸ್ಯ, ಚಾರ್ವಾಕ ಹಾ. ಉ. ಸ. ಸಂಘದ ಉಪಾಧ್ಯಕ್ಷ ಕುಸುಮಾಧರ ಇಡ್ಯಡ್ಕ, ಚಾರ್ವಾಕ ಶಾಲಾ ಎಸ್. ಡಿ, ಎಂ. ಸಿ ಅಧ್ಯಕ್ಷರಾದ ಲೋಕೇಶ್ ಎಣ್ಮೂರು, ನಾಣಿಲ ಎಸ್. ಡಿ. ಎಂ. ಸಿ. ಅಧ್ಯಕ್ಷ ವಸಂತ ದಲಾರಿ, ಹಾಲು ಉತ್ಪಾದಕರ ಸಂಘದ ನಿರ್ದೇಶಕರು, ಗ್ರಾಮ ಪಂಚಾಯತ್ ಸದಸ್ಯರು, ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು, ಬಿ. ಜೆ. ಪಿ ಬೂತ್ ಕಾರ್ಯದರ್ಶಿ ಮಾಧವ ಕೋಲ್ಪೆ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು, ಮಂಡಲ ಕಾರ್ಯದರ್ಶಿ ಗಣೇಶ್ ಉದನಡ್ಕ ಮಾತನಾಡಿ ಮನೆ ನಿರ್ಮಾಣಕ್ಕೆ ಎಲ್ಲರ ಸಹಕಾರ ಕೋರಿದರು. ಧನಂಜಯ ಕೇನಾಜೆ ವಂದಿಸಿದರು.

LEAVE A REPLY

Please enter your comment!
Please enter your name here