ಕಾವು: ಪುದ್ವಾರ್ ಕೂಟ-ಭಜನಾ ಸೇವೆ

0

ಕಾವು: ಕಾವು ಹೊಸಮನೆ ಸಮಾಚಾರ “ಶ್ರೀ”ನಿವಾಸ ತಾರಾವಾತಿ ಚಂದ್ರಶೇಖರ್‌ರವರ ಮನೆಯಲ್ಲಿ ಪುದ್ವಾರ್ ಕೂಟ(ಹೊಸಕ್ಕಿ ಊಟ) ಮತ್ತು ಭಜನಾ ಸೇವೆ ಕಾರ್ಯಕ್ರಮವು ಸೆ.೨೨ರಂದು ನಡೆಯಿತು. ಬೆಳಿಗ್ಗೆ 9.30ರಿಂದ ಮಧ್ಯಾಹ್ನ ೧.೩೦ರವರೆಗೆ ಓಂ ಶ್ರೀ ಭಜನಾ ಸಂಘ ಸಸ್ಪೆಟ್ಟಿ-ಪಳನೀರು, ದುರ್ಗಾವಾಹಿನಿ ಭಜನಾ ಸಂಘ ಮಾಣಿಯಡ್ಕ, ತುಡರ್ ಭಜನಾ ಸಂಘ ನನ್ಯ-ಕಾವು ಇವರಿಂದ ಭಜನಾ ಸೇವೆ ನಡೆಯಿತು. ಬಳಿಕ ಪುದ್ವಾರ್ ಕೂಟವು ಹಲವು ಖಾದ್ಯ ಪದಾರ್ಥಗಳೊಂದಿಗೆ ನಡೆಯಿತು. ದೇವಣ್ಣ ರೈ ಮುದರ್‌ಪಳ್ಳರವರು ಪುದ್ವಾರ್ ಕೂಟದ ಮಹತ್ವ ವಿವರಿಸಿದರು. ತಾರಾವತಿ ಚಂದ್ರಶೇಖರ್‌ರವರು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here