ಪ್ರಾಮಾಣಿಕತೆ ಮೆರೆದ ಕಂಡಕ್ಟರ್ ಮತ್ತು ಕ್ಲೀನರ್

0

ಪುತ್ತೂರು: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಇಲ್ಲಿಯ ಶಿಕ್ಷಕಿಯ ಅಗತ್ಯ ದಾಖಲೆಗಳು ಮತ್ತು ಹಣವಿರುವ ಪರ್ಸ್ ಒಂದು ಕಳೆದುಹೋಗಿತ್ತು. ಈ ಸಂದರ್ಬದಲ್ಲಿ ಅವರು ಹುಡುಕಾಟದಲ್ಲಿದ್ದರು.

ಇತ್ತ ವಾಮದಪದವಿನಿಂದ ವೇಣೂರಿಗೆ ಕಲಾಬಾಗಿಲು ಮಾರ್ಗವಾಗಿ ಸಂಚರಿಸುವ ಗಾಯತ್ರಿ ಬಸ್ಸಿನಲ್ಲಿ ಶಿಕ್ಷಕಿಯ ಅವರ ಪರ್ಸ್‌ ಬಿದ್ದಿರುತ್ತದೆ. ನಾರವಿಯಲ್ಲಿ ಬಸ್ ಕ್ಲೀನ್ ಮಾಡುವ ಸಂದರ್ಭದಲ್ಲಿ ಬಸ್‌ ಕ್ಲೀನರ್‌ ಆದ ನಾರವಿ ಅರಸಿ ಕಟ್ಟೆಯ ಸುಂದರ್ ಹೆಗ್ಡೆಯವರ ಮಗ ಸುಧೀರ್ ಹೆಗ್ಡೆ ಎಂಬವರಿಗೆ ಸಿಕ್ಕಿದ್ದು,ಅದನ್ನು ಕಂಡಕ್ಟರ್ ಶೇಖರ್ ಅವರಿಗೆ ನೀಡಿ ಆ ಬಳಿಕ ಅದನ್ನು ವಾರಿಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಇವರ ಪ್ರಾಮಾಣಿಕತೆ ಮೆಚ್ಚಿ ಬುರೂಜ್ ಶಾಲಾ ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್ ಸುಧೀರ್ ಹೆಗ್ಡೆಯವರಿಗೆ ಮತ್ತು ಶೇಖರ್ ರವರಿಗೆ ಹಾರ ಹಾಗೂ ಶಾಲು ಹಾಕಿ ಗೌರವಿಸಿದ್ದಾರೆ. ಇವರ ಪ್ರಾಮಾಣಿಕತೆ ಇತರರಿಗೂ ಮಾದರಿ ಎಂದು ಹೊಗಳಿದ್ದಾರೆ.

LEAVE A REPLY

Please enter your comment!
Please enter your name here