ಸನ್ಯಾಸಿಗುಡ್ಡೆ ಮೀಲಾದ್ ಕಮಿಟಿ ಮಹಾಸಭೆ-ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ರಶೀದ್ ಸನ್ಯಾಸಿಗಡ್ಡೆ, ಪ್ರ.ಕಾರ್ಯದರ್ಶಿ ಹನೀಫ್ ಧರ್ಮಲೆ

ಪುತ್ತೂರು: ಮೀಲಾದ್ ಕಮಿಟಿ ಸನ್ಯಾಸಿಗುಡ್ಡೆ ಇದರ ವಾರ್ಷಿಕ ಮಹಾ ಸಭೆ ಅಧ್ಯಕ್ಷ ರಶೀದ್ ಸನ್ಯಾಸಿಗುಡ್ಡೆ ಅಧ್ಯಕ್ಷತೆಯಲ್ಲಿ ನಡೆಯಿತು. ಗೌರವಾಧ್ಯಕ್ಷರಾದ ಅಬೂಬಕ್ಕರ್ ಉಪಸ್ಥಿತರಿದ್ದರು.
ಪ್ರ.ಕಾರ್ಯದರ್ಶಿ ಹನೀಫ್ ಧರ್ಮಲೆ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು. ಬಶೀರ್ ಡಿ.ಎ ಗಟ್ಟಮನೆಯವರು ದುವಾದೊಂದಿಗೆ ಸಭೆ ಉದ್ಘಾಟಿಸಿದರು. ನಂತರ 2024-25ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು ಗೌರವಾಧ್ಯಕ್ಷರಾಗಿ ಅಬೂಬಕ್ಕರ್ ಎ.ಎಸ್, ಅಧ್ಯಕ್ಷರಾಗಿ ರಶೀದ್ ಸನ್ಯಾಸಿಗಡ್ಡೆ, ಉಪಾಧ್ಯಕ್ಷರಾಗಿ ಶರೀಫ್ ಕೆ, ಪ್ರ.ಕಾರ್ಯದರ್ಶಿಯಾಗಿ ಹನೀಫ್ ಧರ್ಮಲೆ, ಜೊತೆ ಕಾರ್ಯದರ್ಶಿಯಾಗಿ ಬಶೀರ್ ಡಿ ಎ, ಹಾಗೂ ಕೋಶಾಧಿಕಾರಿಯಾಗಿ ಇಬ್ರಾಹಿಂ ಆರ್ಯಾಪು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಹನೀಫ್ ಕೆ ಅವರನ್ನು ಆಯ್ಕೆ ಮಾಡಲಾಯಿತು.

ಗಲ್ಫ್ ಕಮಿಟಿ ಸದಸ್ಯರಾಗಿ ಫಾರೂಖ್ ಖತರ್, ಝಿಯಾದ್ ದುಬೈ, ಆಶಿಖ್ ಅಬುದಾಬಿ, ನಿಝಾರ್ ಅಬುದಾಬಿಯವರನ್ನು ಆಯ್ಕೆ ಮಾಡಲಾಯಿತು. ಹೈದರಾಲಿ, ಬದ್ರುದ್ದೀನ್, ನವಾಝ್, ಹಮೀದ್ ಕೆ, ರಫೀಕ್ ಕೆ, ಬಶೀರ್ ಕೆ , ಯೂನುಸ್, ಅನ್ಸಾರ್, ಕಬೀರ್, ಸುಲೈಮಾನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಹನೀಫ್ ಧರ್ಮಲೆ ವಂದಿಸಿದರು.

LEAVE A REPLY

Please enter your comment!
Please enter your name here