ಪುತ್ತೂರು ನಗರಸಭಾ ನಾಮ ನಿರ್ದೇಶನ ಸದಸ್ಯರಾಗಿ ನೇಮಕಗೊಂಡ ರೋಶನ್ ರೈ ಬನ್ನೂರುರವರಿಗೆ ರೋಟರಿ ಸ್ವರ್ಣದಿಂದ ಅಭಿನಂದನೆ

0

ಪುತ್ತೂರು: ಪುತ್ತೂರು ನಗರಸಭಾ ನಾಮ ನಿರ್ದೇಶನ ಸದಸ್ಯರಾಗಿ ನೇಮಕಗೊಂಡ ರೋಶನ್ ರೈ ಬನ್ನೂರುರವರಿಗೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣದಿಂದ ಅಭಿನಂದನೆ ಕಾರ್ಯಕ್ರಮ ಅ.3ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಅಭಿನಂದನೆಯನ್ನು ಸಲ್ಲಿಸಿ ಮಾತನಾಡಿದ ರೋಟರಿ ಸ್ವರ್ಣ ಮಾಜಿ ಅಧ್ಯಕ್ಷ  ಭಾಸ್ಕರ್ ಕೋಡಿಂಬಾಳರವರು, ಯಾವುದೇ ಫಲಾಪೇಕ್ಷೆ ಇಲ್ಲದೆ ಇರುವ ವ್ಯಕ್ತಿಯನ್ನು ಗುರುತಿಸಿ ನಗರ ಸಭೆಗೆ ಸದಸ್ಯರಾಗಿ ನಾಮ ನಿರ್ದೇಶನ ಮಾಡಲಾಗಿದೆ. ರೋಶನ್ ರೈ ಬನ್ನೂರುರವರು ಅನೇಕ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬರುತ್ತಿದ್ದು, ಇವರು ಪ್ರಚಾರಪ್ರಿಯರಲ್ಲ. ತಾನು ಮಾಡುವ ಸೇವೆಯಲ್ಲಿ ಧನ್ಯತೆಯನ್ನು ಕಾಣುವವರು ಎಂದು ಇವರ ಮುಂದಿನ ಜೀವನ ಇನ್ನಷ್ಟು ಉನ್ನತ ಸ್ಥಾನಕ್ಕೆ ಏರಲಿ ಎಂದು ಶುಭ ಹಾರೈಸಿದರು. 

ಕಾರ್ಯಕ್ರಮದಲ್ಲಿ ವಲಯ ಸೇನಾನಿ ವೆಂಕಟರಮಣ ಗೌಡ ಕಳುವಾಜೆ, ನಿಕಟಪೂರ್ವ ಅಧ್ಯಕ್ಷ ಸುಂದರ ರೈ ಬಲ್ಕಾಡಿರವರು ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕ್ಲಬ್ ಅಧ್ಯಕ್ಷರಾದ ಕ್ಲಬ್ ಅಧ್ಯಕ್ಷ ಸುರೇಶ್ ಪಿ.ರವರು ಮಾತನಾಡಿ, ಪುತ್ತೂರು ನಗರಸಭೆಗೆ ಸದಸ್ಯರಾಗಿ ನಾಮ ನಿರ್ದೇಶನಗೊಂಡ ರೋಶನ್ ರೈ ಬನ್ನೂರು ಹಲವಾರು ಸಮಾಜಮುಖಿ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು ಇವರಿಂದ ಸಮಾಜಕ್ಕೆ ಇನ್ನಷ್ಟು ಉತ್ತಮ ಕಾರ್ಯಗಳು ಲಭಿಸುವಂತೆ ಆಗಲಿ ಹಾಗೂ ಇದಕ್ಕಿಂತ ಉನ್ನತ ಹುದ್ದೆಯ ಅವರಿಗೆ ಲಭಿಸಲಿ ಎಂದು ಹೇಳಿ ಶುಭ ಹಾರೈಸಿದರು.  

ಈ ಸಂದರ್ಭದಲ್ಲಿ ಆರೋಗ್ಯ ವಿಮೆಯ ಕುರಿತು ಕ್ಲಬ್ ಸದಸ್ಯ ಪ್ರಕಾಶ್ ಮೆಲ್ವಿನ್ ಸಿಕ್ವೇರಾರವರು ಮಾಹಿತಿಯನ್ನು ನೀಡಿದರು ಜೊತೆಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಈ ಮಹಾತ್ಮರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಕ್ಲಬ್ ಸದಸ್ಯೆ ಮೀನಾಕ್ಷಿ ಪ್ರಾರ್ಥಿಸಿದರು. ಸದಸ್ಯ ಉಮೇಶ್ ಎಂ.ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಸೆನೋರಿಟಾ ಆನಂದ್ ವಾರದ ವರದಿಯನ್ನು ಮಂಡಿಸಿದರು. ಸುರೇಂದ್ರ ಆಚಾರ್ಯ ವಂದಿಸಿದರು.

LEAVE A REPLY

Please enter your comment!
Please enter your name here