ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಶ್ರೀ ಶಾರದಾ ಪೂಜೆ, ವಾಹನ ಪೂಜೆ

0

ಪುತ್ತೂರು: ಬನ್ನೂರಿನ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಅ.11ರಂದು ಶ್ರೀ ಶಾರದಾ ಪೂಜೆ ಹಾಗೂ ಆಯುಧ ಪೂಜೆಗಳೊಂದಿಗೆ ವಾಹನ ಪೂಜೆ ಹಾಗೂ ವೈದಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆದವು.

ಶಾಲಾ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಧಾಕೃಷ್ಣ ಇಟ್ಟಿಗುಂಡಿ (ನಿತ್ಯ ಚಪಾತಿ) ಅವರು ಶಾರದಾ ಪೂಜೆ ಹಾಗೂ ಆಯುಧ ಪೂಜೆಗಳ ಮಹತ್ವಗಳನ್ನೂ ತಿಳಿಸಿದರು.


ಸನ್ಮಾನ:
ಎವಿಜಿ ಅಸೋಸಿಯೇಟ್ಸ್’ನ ಹಿರಿಯ ಕಾರ್ಮಿಕರಾದ ತಿಮ್ಮಪ್ಪ ಗೌಡ, ಚೆನ್ನಪ್ಪ, ವಿಲಿಯಂ ಸುವಾರೀಸ್ ಮತ್ತು ಬಸವರಾಜರವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮ ಕ್ಷೇತ್ರದ ಸಾಧಕ ರಾಧಾಕೃಷ್ಣ ಇಟ್ಟಿಗುಂಡಿಯವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಶಾಲಾ ಸಂಚಾಲಕ ಎ.ವಿ. ನಾರಾಯಣರವರು ಎವಿಜಿ ಅಸೋಸಿಯೇಟ್ಸ್’ನ ಹಿರಿಯ ಕಾರ್ಮಿಕರ ಬಗ್ಗೆ ಪರಿಚಯ ಮಾಡಿದರು. ಶಾಲಾ ನಿರ್ದೇಶಕ ಸೀತಾರಾಮ ಕೇವಳ ಅವರು ಅತಿಥಿಯನ್ನು ಪರಿಚಯಿಸಿದರು. ಶಾಲಾ ಪ್ರಧಾನ ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯರವರು ಅಭಿನಂದನ ಭಾಷಣ ಮಾಡಿದರು. ಪ್ರಾಂಶುಪಾಲೆ ಸವಿತಾ ಕುಮಾರಿ ಕೆ ಯವರು ಸನ್ಮಾನ ಪತ್ರವನ್ನು ವಾಚಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಶ್ರೀ ಹೆಗ್ಡೆ, ನಿರ್ದೇಶಕರಾದ ಪುಷ್ಪಾವತಿ ಕಳುವಾಜೆ, ವಾಮನ ಗೌಡ, ಸೀತಾರಾಮ ಪೂಜಾರಿ, ಗಂಗಾಧರ ಗೌಡ, ವನಿತಾ ಎ.ವಿ., ದೀಕ್ಷಾ ವಾಮನ ಗೌಡ, ಡಾ. ಹರಿಣಾಕ್ಷಿ ಸೀತಾರಾಮ ಕೇವಳ, ಉಮಾವತಿ ರಾಧಾಕೃಷ್ಣ, ಗಂಗಯ್ಯ ಗೌಡ ತಾಳಿಪಡ್ಪು ಕೌಶಿಕ್ ಎ.ಜಿ ಮತ್ತು ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಬ್ರಾಹ್ಮರಿ ಮಹಿಳಾ ಭಜನಾ ಮಂಡಳಿ ಕುಂಟ್ಯಾನ ಇವರಿಂದ ಭಜನೆ ಹಾಗೂ ಶ್ರೀ ನಂದಿಕೇಶ್ವರ ಭಜನಾ ಮಂಡಳಿ, ಬೆದ್ರಾಳ ಇವರಿಂದ ಕುಣಿತ ಭಜನೆ ನಡೆದವು. ನಿರ್ದೇಶಕಿ ಪ್ರತಿಭಾ ದೇವಿ ಸ್ವಾಗತಿಸಿ, ಕೃಪಾ ಪ್ರಾರ್ಥಿಸಿದರು. ಉಪಾಧ್ಯಕ್ಷ ಉಮೇಶ್ ಮಳುವೇಲುರವರು ವಂದಿಸಿದರು. ಶಿಕ್ಷಕಿಯರಾದ ವನಿತಾ ಮತ್ತು ಯಶುಭಾ ರೈ ರವರು ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here