ಕಡಬ: ಇಲ್ಲಿನ ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದ ನಾಗನಕಟ್ಟೆ ಮತ್ತು ದೈವಗಳ ಚಾವಡಿ ಮತ್ತು ಕಟ್ಟೆಗಳಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಾಗಪ್ರತಿಷ್ಠೆ ಮತ್ತು ರಕ್ತೇಶ್ವರಿ, ವ್ಯಾಘ್ರಚಾಮುಂಡಿ ಹಾಗೂ ಇತರ ದೈವಗಳ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಜ.24ರಂದು ನಡೆಯಲಿದೆ.
ಜ.23ರಂದು ದೇವಾಲಯದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಏಕಾದಶ ರುದ್ರಾಭಿಷೇಕ ಹಾಗೂ ರುದ್ರಹೋಮ ಶ್ರೀ ದೇವರಿಗೆ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸತೀಶ್ ನಾಕ್ ಮೇಲಿನ ಮನೆ, ಆಡಳಿತಾಧಿಕಾರಿ ಶೇಷಾದ್ರಿ, ಪ್ರಮುಖರಾದ ಮಹಾಬಲ ನಾಕ್ ಮೇಲಿನ ಮನೆ, ಮುತ್ತುಕುಮಾರ್, ಜನಾರ್ದನ ಗೌಡ ಪಣೆಮಜಲು, ಶಿವಪ್ರಸಾದ್ ಮೈಲೇರಿ, ಪ್ರಕಾಶ್ ಎನ್.ಕೆ,ಮೋನಪ್ಪ ಗೌಡ ನಾಡೋಳಿ, ಪ್ರಮೋದ್ ರೈ ನಂದುಗುರಿ ಮೊದಲಾದವರು ಉಪಸ್ಥಿತರಿದ್ದರು