ಕಬಕ ಗ್ರಾ.ಪಂ.ವಿಶೇಷಚೇತನರ ಗ್ರಾಮಸಭೆ

0

ಪುತ್ತೂರು: 2024-25ನೇ ಸಾಲಿನ ವಿಶೇಷ ಚೇತನರ ಗ್ರಾಮ ಸಭೆ ಕಬಕ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷೆ ಸುಶೀಲರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹಿರಿಯ ತೋಟಗಾರಿಕೆ ಇಲಾಖೆಯ ನಿರ್ದೇಶಕಿ ರೇಖಾ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಮಾರ್ಗದರ್ಶಿ ಅಧಿಕಾರಿಯಾಗಿ ಪುತ್ತೂರು ತಾಲ್ಲೂಕು ಮಟ್ಟದ ವಿಕಲಚೇತನರ ಪುನರ್‌ವಸತಿ ಕಾರ್ಯಕರ್ತ ನವೀನ್ ಕುಮಾರ್ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆ ಯೋಜನೆಗಳ ಮಾಹಿತಿ ನೀಡಿದರು.

ಕಬಕ ಸಮುದಾಯದ ಅರೋಗ್ಯ ಕೇಂದ್ರ ವ್ಯೆಧ್ಯಾದಿಕಾರಿ ವಿಕಲಚೇತನರ ಹಾಗೂ ಎಂಡೋ ಪೀಡಿತರ ಅರೋಗ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಕೇಂದ್ರ ವತಿಯಿಂದ ವಿಕಲಚೇತನರ ವ್ಯಕ್ತಿಗಳಿಗೆ ಹಾಗೂ ಎಂಡೋ ಪೀಡಿತರಿಗೆ ಅರೋಗ್ಯ ತಪಾಸಣೆ ನಡೆಯಿತು.

ವಿಕಲಚೇತನರು/ವಿಕಲಚೇತನರ ಆರೈಕೆದಾರರು ಭಾಗವಹಿಸಿದರು. ಆಶಾಕಾರ್ಯಕರ್ತರು ಅರೋಗ್ಯ ಕೇಂದ್ರ ಹಿರಿಯ ಅರೋಗ್ಯ ಸಹಾಯಕರು, ಕಬಕ ಗ್ರಾಮೀಣಪುನರ್ವಸತಿ ಕಾರ್ಯಕರ್ತೆ ಶೀಲಾವತಿ ಸಹಕರಿಸಿದರು. ಕಬಕ ಅಂಗನವಾಡಿ ಕಾರ್ಯಕರ್ತೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here