ರಾಮಕುಂಜ: ಜೀರ್ಣೋದ್ದಾರಗೊಂಡಿರುವ ರಾಮಕುಂಜ ಗ್ರಾಮದ ನೀರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಪುನ: ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಮಾ.7ರಂದು ವೇದಮೂರ್ತಿ ಭಾರತೀರಮಣ ಆಚಾರ್ಯರ ಆಚಾರ್ಯತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ದೇವರ ಪುನ: ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ.2ರಿಂದ ಮಾ.7ರ ತನಕ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ಮಾ.2ರಂದು ಸಾಯಂಕಾಲ ಋತ್ವಿಜರಿಗೆ ಸ್ವಾಗತ ಕೋರಲಾಯಿತು. ಆ ಬಳಿಕ ಪ್ರಾರ್ಥನೆ, ಪುಣ್ಯಾಹವಾಚನ, ಸಂಕಲ್ಪ, ಆಚಾರ್ಯವರಣ, ತೋರಣ ಮುಹೂರ್ತ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ಭೂವರಾಹ ಹೋಮ, ವಾಸ್ತುಹೋಮ, ವಾಸ್ತುಪೂಜೆ, ವಾಸ್ತುಬಲಿ, ಮಹಾಪೂಜೆ ನಡೆಯಿತು. ಮಾ.3ರಂದು ಪ್ರಾತ:ಕಾಲ ಪುಣ್ಯಾಹವಾಚನ, ನಾಂದೀ ಸಮಾರಾಧನ, ಕಂಕಣಬಂಧನ, ಅರಣಿಮಥನ, ಅಂಕುರಾರ್ಪಣ, ಗಣಪತಿ ಹೋಮ, ವಿಷ್ಣುಗಾಯತ್ರೀ ಮಂತ್ರಹೋಮ, ಪವಮಾನ ಹೋಮ, ಭಾಗ್ಯಕ್ಯ ಸೂಕ್ತ ಹೋಮ, ಮಹಾಪೂಜೆ, ಸಾಯಂಕಾಲ ಸುದರ್ಶನ ಹೋಮ, ಉದಕಶಾಂತಿ, ಮಹಾಪೂಜೆ ನಡೆಯಿತು. ಮಾ.4ರಂದು ಪ್ರಾತ:ಕಾಲ ಶಾಂತಿ ಪ್ರಾಯಶ್ಚಿತ್ತ ಹೋಮ, ನವಗ್ರಹ ಹೋಮ, ಕೂಷ್ಮಾಂಡ ಹೋಮ, ಮಹಾಪೂಜೆ, ಸಾಯಂಕಾಲ ವನದುರ್ಗಾ ಮಂತ್ರಹೋಮ, ದುರ್ಗಾನಮಸ್ಕಾರ, ಮಹಾಪೂಜೆ ನಡೆಯಿತು. ಮಾ.೫ರಂದು ಪ್ರಾತ:ಕಾಲ ಅದ್ಭುತ ಶಾಂತಿ, ಅಷ್ಟಮಹಾಮಂತ್ರ ಹೋಮ, ತಿಲಹೋಮ, ಮನ್ಯುಸೂಕ್ತಹೋಮ, ಮಹಾಪೂಜೆ, ಸಾಯಂಕಾಲ ದಗ್ದಶಾಂತಿ, ಚೋರಶಾಂತಿ, ಮಹಾಪೂಜೆ ನಡೆಯಿತು.
ದೇವರ ವಿಗ್ರಹ ಪ್ರತಿಷ್ಠೆ:
ಮಾ.6ರಂದು ಪ್ರಾತ:ಕಾಲ ಬಿಂಬ ಸಂಕೋಚ, ಅಷ್ಟಬಂಧಲೇಪನ ನಡೆದು 11 ಗಂಟೆಯ ವೃಷಭ ಲಗ್ನದಲ್ಲಿ ದೇವರ ಪುನ: ಪ್ರತಿಷ್ಠೆ ನಡೆದು, ಪ್ರತಿಷ್ಠಾ ಹೋಮ, ಲಕ್ಷ್ಮೀಹೃದಯಮಂತ್ರ ಹೋಮ, ಮಹಾಪೂಜೆ, ಸಾಯಂಕಾಲ ಚಕ್ರಾಬ್ದ ಮಂಡಲಪೂಜೆ, ಕಲಶ ಮಂಡಲ ರಚನೆ, ಮಹಾಪೂಜೆ ನಡೆಯಿತು.

ಬ್ರಹ್ಮಕಲಶಾಭಿಷೇಕ:
ಮಾ.7ರಂದು ಪುಣ್ಯಾಹ ವಾಚನ, ತತ್ವಕಲಶ, ಬ್ರಹ್ಮಕಲಶಾಧಿವಾಸ, ತತ್ವಹೋಮ, ಪ್ರಧಾನ ಹೋಮ, ಪುರಸ್ಸರ, ಶ್ರೀ ದೇವರಿಗೆ 11 ಗಂಟೆಯ ವೃಷಭ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಬ್ರಾಹ್ಮಣ ಸುವಾಸಿನೀ ಆರಾಧನಾ ಪುರಸ್ಸರ ಅನ್ನಸಂತರ್ಪಣೆ ನಡೆಯಿತು.
ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಎಂ.ರಘುರಾಮ ಆಚಾರ್ಯ ಉಡುಪಿ, ಉಪಾಧ್ಯಕ್ಷರಾದ ರತ್ನಾಕರ ಪಾಂಗಣ್ಣಾಯ ಕೊಕ್ಕಡ, ಸುಬ್ರಹ್ಮಣ್ಯ ಪಾಂಗಣ್ಣಾಯ ಮೂಡುಬಿದ್ರೆ, ಕೃಷ್ಣಮೂರ್ತಿ ಪಾಂಗಣ್ಣಾಯ ಬೆಂಗಳೂರು, ಸತ್ಯಪ್ರಕಾಶ ಪಾಂಗಣ್ಣಾಯ ಬೆಂಗಳೂರು, ದೇವಿಪ್ರಸಾದ ನೀರಾಜೆ, ಕೃಷ್ಣಮೂರ್ತಿ ಕಲ್ಲೂರಾಯ ಕೆರೆಕರೆ, ಕೆ.ಪುರುಷೋತ್ತಮ ಗೋಕುಲನಗರ, ಸಂಚಾಲಕರಾದ ರಾಮಚಂದ್ರ ಪಾಂಗಣ್ಣಾಯ ಉಡುಪಿ, ಪ್ರಧಾನ ಕಾರ್ಯದರ್ಶಿ ನಾರಾಯಣ ಭಟ್ ಟ. ರಾಮಕುಂಜ, ಕಾರ್ಯದರ್ಶಿ ಉದಯ ಪಾಂಗಣ್ಣಾಯ ಪೆರ್ಜಿ, ಅಮೃತೇಶ್ ನೀರಾಜೆ, ಕೋಶಾಧಿಕಾರಿ ಕೆ.ಸುರೇಶ ಕಲ್ಲೂರಾಯ, ಅರ್ಚಕ ಶೈಲೇಶ್ ಮನೋಳಿತ್ತಾಯ ಮತ್ತಿತರರು ಉಪಸ್ಥಿತರಿದ್ದರು.