ಕಾಣಿಯೂರು: ದಕ್ಷಿಣ ಕನ್ನಡ ಜಿಲ್ಲೆಯ ರೈಲು ಪ್ರಯಾಣಿಕರ ದೀರ್ಘಕಾಲದ ನಿರೀಕ್ಷೆಗೆ ಇತಿಹಾಸದ ತಿರುವು ಸಿಕ್ಕಿದೆ. ಮಂಗಳೂರು ಸೆಂಟ್ರಲ್ನಿಂದ ಕಬಕ ಪುತ್ತೂರಿಗೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲನ್ನು ಈಗ ಸುಬ್ರಹ್ಮಣ್ಯ ಜಂಕ್ಷನ್ವರೆಗೆ ವಿಸ್ತರಿಸಲಾಗಿದೆ.
ಈ ವಿಷಯವನ್ನು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಈ ವಿಸ್ತರಣೆಗೊಂಡ ಕಬಕ ಪುತ್ತೂರು ಎಕ್ಸ್ಪ್ರೆಸ್ ರೈಲನ್ನು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸೋಮಣ್ಣ ಅವರು ಏ.12ರಂದು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಸಂಜೆ 4 ಗಂಟೆಗೆ ಧ್ವಜ ಪ್ರದರ್ಶನದ ಮೂಲಕ ಆರಂಭಿಸಲಿದ್ದಾರೆ.
ಈ ಯೋಜನೆಯನ್ನು ಕೇಂದ್ರ ರೈಲ್ವೆ ಸಚಿವಾಲಯದೊಂದಿಗೆ ಪ್ರಾಮುಖ್ಯತೆಯಿಂದ ಮುಂದಿಟ್ಟು, ಈ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸಿದ್ದಾಗಿ ಟ್ವೀಟ್ನಲ್ಲಿ ಕ್ಯಾ| ಚೌಟ ತಿಳಿಸಿದ್ದಾರೆ.
ರೈಲು ಪ್ರಿಯರು, ನಿತ್ಯ ಪ್ರಯಾಣಿಕರನ್ನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದ್ದಾರೆ. ಈ ವಿಸ್ತರಣೆ ದಕ್ಷಿಣ ಕನ್ನಡ ಭಾಗದ ಸಂಚಾರ ಸುಗಮತೆಗೆ ಮಹತ್ವದ ಮೆಟ್ಟಿಲಾಗಿದೆ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಸಹಕಾರಿಯಾಗಲಿದೆ.
Sir when will start Mangalore Mumbai vandebharath express train.