ಶಿಕ್ಷಣ ಎಂಬುದು ನಿಂತ ನೀರಲ್ಲ. ಈ ಕ್ಷೇತ್ರದಲ್ಲಿ ಹಲವು ರೀತಿಯ ಬದಲಾವಣೆಗಳು ಆಗಿರುತ್ತದೆ. ಕಲಿಕೆಯ ವಿಷಯ ಬೋಧನಾ ವಿಧಾನಗಳಲ್ಲಿ ಆಧುನಿಕ ಶೈಲಿಯನ್ನು, ನೂತನ ಕ್ರಮಗಳನ್ನು ಅಳವಡಿಸಲಾಗುತ್ತಿದೆ. ಈ ರೀತಿ ನಿರಂತರವಾಗಿ ಹಲವು ಪ್ರಯೋಗಗಳಿಗೆ ಒಳಪಡುತ್ತಿರುವುದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ. ಇದು ವಿದ್ಯಾರ್ಥಿಗಳ ಪಾಲಿಗೆ ಕೆಡುಕಾಗಿ ಪರಿಣಮಿಸುತ್ತಿದೆ. ಇಂದಿನ ಶಿಕ್ಷಣ ನೀತಿಯ ಪ್ರಕಾರ ಒಂದರಿಂದ ಒಂಭತ್ತನೆಯ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಉತ್ತೀರ್ಣಗೊಳಿಸಬೇಕು. ಅಂದರೆ, ವಿದ್ಯಾರ್ಥಿಯು ತಾನು ಕಲಿಯುತ್ತಿರುವ ವಿಷಯಗಳ ಬಗ್ಗೆ ಕನಿಷ್ಟ ಜ್ಞಾನವನ್ನು (35% ಅಂಕಗಳನ್ನು ಗಳಿಸುವ ಸಾಮರ್ಥ್ಯ) ಹೊಂದಿಲ್ಲದಿದ್ದರೂ ಮುಂದಿನ ತರಗತಿಗೆ ತೇರ್ಗಡೆಗೊಳ್ಳುವ ಅವಕಾಶವಿದೆ. ಈ ರೀತಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಗಣಿತದ ಮೂಲಭೂತ ಕ್ರಿಯೆಗಳಿರಬಹುದು ಅಥವಾ ವಿಜ್ಞಾನ, ಇಂಗ್ಲೀಷ್ ಇನ್ನಿತರ ಎಲ್ಲಾ ವಿಷಯಗಳ ಮೂಲಭೂತ (Basic) ಅಂಶಗಳ ಪರಿಜ್ಞಾನವೇ ಇರುವುದಿಲ್ಲ. ಹಿಂದಿನ ತರಗತಿಗಳಲ್ಲಿ ಏನನ್ನು ಅಧ್ಯಯನ ಮಾಡುತ್ತಾರೋ ಅದರ ಮುಂದುವರಿದ ಭಾಗವೇ ಮುಂದಿನ ತರಗತಿಯಲ್ಲಿ ಅಭ್ಯಾಸಿಸಬೇಕಾಗಿರುವುದು. ತಳಪಾಯವೇ ಸಡಿಲಗೊಂಡರೆ ಮುಂದಿನ ತರಗತಿಗಳ ಪಠ್ಯ ಖಂಡಿತವಾಗಿಯೂ ಅರ್ಥವಾಗುವುದಿಲ್ಲ. ಪರಿಣಾಮವಾಗಿ ಹತ್ತನೇ ತರಗತಿಯಲ್ಲಿ ಅನುತ್ತೀರ್ಣಗೊಳ್ಳುವ ಅಥವಾ ಭವಿಷ್ಯದಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುವ ಸಂಭವವಿರುತ್ತದೆ. ಜೊತೆಗೆ ಹಲವು ವಿದ್ಯಾರ್ಥಿಗಳಲ್ಲಿರುವ ಇನ್ನೊಂದು ನ್ಯೂನ್ಯತೆ ಎಂದರೆ ಪರಿಮಿತಿಯನ್ನಿಟ್ಟುಕೊಂಡು ಕಲಿಯುವುದು. ಎಲ್ಲವೂ ಪರೀಕ್ಷೆ ಮುಗಿಯುವ ತನಕ ಎಂಬ ಉಡಾಫೆ. ಪರೀಕ್ಷೆಯ ಮರುದಿನಕ್ಕೆ ಹಿಂದೆ ಕಲಿತ ಒಂದು ವಿಷಯದ ಬಗ್ಗೆಯೂ ನೆನಪಿಲ್ಲ, ಜ್ಞಾನವಿಲ್ಲ. ಇದು ದುರಂತ! ಏನನ್ನು ಓದುತ್ತೇವೆಯೋ ಕಲಿಯುತ್ತೇವೆಯೋ ಅದಕ್ಕೆ ಯಾವುದೇ ಮಿತಿಗಳಿರಬಾರದು. ಹೆಚ್ಚು ಹೆಚ್ಚು ತಿಳಿದುಕೊಳ್ಳುವ ಆಸಕ್ತಿ ಹಾಗೂ ಹಂಬಲವಿರಬೇಕು. ಆಸಕ್ತಿಯಿಂದ ಯಾವ ವಿಷಯವನ್ನು ಓದುತ್ತೇವೆಯೋ ಅದು ಜೀವನ ಪರ್ಯಂತ ಅಚ್ಚಳಿಯದಂತೆ ನೆನಪುಳಿಯುತ್ತದೆ. ತಾರ್ಕಿಕ ಗುಣ ಹಾಗೂ ಪ್ರಶ್ನಿಸುವ ಸ್ವಭಾವ ವಿದ್ಯಾರ್ಥಿಗಳಲ್ಲಿದ್ದರೆ ಒಳಿತು. ಇದರಿಂದ ಅವರ ಜ್ಞಾನ ವಿಸ್ತಾರಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಹಾಗಾದರೆ ವಿದ್ಯಾರ್ಥಿಗಳಲ್ಲಿ ಇಂತಹ ಗುಣಗಳನ್ನು ಹೆಚ್ಚಿಸುವುದು ಹೇಗೆ? ಅವರಲ್ಲಿ ಶಿಕ್ಷಣದ ತಳಪಾಯ ಭದ್ರಪಡಿಸುವುದೆಂತು? ಇವುಗಳಿಗೆಲ್ಲಾ ಪರಿಹಾರವೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ’ಉತ್ತರ’ದೊಂದಿಗೆ ನಿಂತಿದೆ ಪ್ರಗತಿ ಸ್ಟಡಿ ಸೆಂಟರ್.

ಪುತ್ತೂರಿನಲ್ಲಿ 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಶಿಕ್ಷಣ ಕ್ಷೇತ್ರಕ್ಕೆ ವಿಶಿಷ್ಟವಾದ ಕೊಡುಗೆಗಳನ್ನು ನೀಡುತ್ತಾ ಬರುತ್ತಿದೆ. ವಿಶೇಷವಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಭವಿಷ್ಯವನ್ನು ಪುನರ್ ರೂಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಪುತ್ತೂರಿನ ಹಲವು ಪ್ರಥಮಗಳಿಗೆ ಭಾಜನವಾಗಿರುವ ಪ್ರಗತಿ ವಿದ್ಯಾಸಂಸ್ಥೆ ಇದೀಗ ಮತ್ತೊಂದು ನೂತನ ಮೈಲಿಗಲ್ಲನ್ನು ಸ್ಥಾಪಿಸುವ ಸಿದ್ಧತೆಯಲ್ಲಿದೆ. 6 ರಿಂದ 9ನೇಯ ತರಗತಿ (5 ರಿಂದ 6ನೇ, 6ರಿಂದ 7ನೇ, 7ರಿಂದ 8ನೇ ಹಾಗೂ 8 ರಿಂದ 9ನೇ ತರಗತಿಗಳಿಗೆ ಉತ್ತೀರ್ಣರಾದ) ವಿದ್ಯಾರ್ಥಿಗಳಿಗಾಗಿ ಬೇಸಿಗೆ ರಜೆಯನ್ನು ಸದ್ಭಳಕೆ ಮಾಡಿಕೊಳ್ಳುವ ಸಲುವಾಗಿ Answer-2025 ಎಂಬ ಹೆಸರಿನೊಂದಿಗೆ ವಿಶಿಷ್ಟ ರೀತಿಯಲ್ಲಿ Basic Science, Basic Maths and Basic English ತರಗತಿಗಳನ್ನು ಹಮ್ಮಿಕೊಳ್ಳುತ್ತಿದೆ. ೧೮ ವರ್ಷಗಳಿಂದ ವಿದ್ಯಾರ್ಥಿಗಳೊಂದಿಗಿನ ಒಡನಾಟವು ಅವರ ನ್ಯೂನ್ಯತೆಗಳನ್ನು ಗುರುತಿಸಲು ಸಹಕಾರಿಯಾಯಿತು. ತನ್ನ ಈ ಅನುಭವವನ್ನು ಬಳಸಿಕೊಂಡು ಇದುವರೆಗೆ ಪುತ್ತೂರು ಹಾಗೂ ಆಸುಪಾಸಿನಲ್ಲಿ ಯಾರೂ ಹಮ್ಮಿಕೊಂಡಿರದ ವಿನೂತನ ತರಗತಿಯಾದ Answer-2025 ಅನ್ನು ಪ್ರಾರಂಭಿಸುತ್ತಿದೆ.
ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ವಿಶಿಷ್ಟವಾದ ಪ್ರಯೋಗ. ಇಂದು ಹಲವು ವಿದ್ಯಾರ್ಥಿಗಳಿಗೆ ಗಣಿತದ ಮೂಲ ಕ್ರಿಯೆಗಳಾದ ಕೂಡುವುದು, ಕಳೆಯುವುದರಿಂದ ತೊಡಗಿ ವಿಜ್ಞಾನ ಹಾಗೂ ಇಂಗ್ಲೀಷ್ನ ಸಾಮಾನ್ಯ ಅರಿವು ಇರುವುದಿಲ್ಲ. ಇಷ್ಟನ್ನು ತಿಳಿಯದ ವಿದಾರ್ಥಿಗಳು ಮುಂದಿನ ಎಲ್ಲಾ ವಿಷಯಗಳನ್ನು ಅರ್ಥ ಮಾಡಿಕೊಳ್ಳಲಾಗದೇ ಒದ್ದಾಡುತ್ತಾರೆ. ಈ ಬೇಸಿಕ್ ವಿಷಯಗಳನ್ನು ತಿಳಿದ ವಿದಾರ್ಥಿಗಳಲ್ಲಿ ಹಲವರಿಗೆ ವೇಗವಾಗಿ ಕ್ರಿಯೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಈಗಾಗಲೇ 7, 8 ತರಗತಿಗಳಲ್ಲಿ ಕಲಿಯುತ್ತಿರುವ ವಿದಾರ್ಥಿಗಳು ಹಲವು ವಿಷಯಗಳಿಂದ ವಂಚಿತರಾಗಿದ್ದಾರೆ. ಜೊತೆಗೆ ವಿದಾರ್ಥಿಗಳಿಗಿರುವ ಇನ್ನೊಂದು ಸಮಸ್ಯೆ ಎಂದರೆ ಗಣಿತದ ಹಲವು ಸಮಸ್ಯೆಗಳನ್ನು ಬಿಡಿಸಲು ಸುಲಭಮಾರ್ಗ (Shortcut Method) ತಿಳಿದಿರುವುದಿಲ್ಲ. ಪ್ರತಿಯೊಂದನ್ನು ದೀರ್ಘವಾಗಿ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಾರೆ. ಇನ್ನು ಇಂಗ್ಲೀಷ್ ನ ವಿಚಾರಕ್ಕೆ ಬಂದರೆ ನಮಗೆ ತಿಳಿಯದ ಅದೆಷ್ಟೋ ವಿಚಾರಗಳಿವೆ. ಒವೆಲ್ ಎಂದರೆ ಏನು? ಅದರ ವಿಶೇಷತೆಗಳೇನು? ಆಕ್ಸಫರ್ಡ್ ಶಬ್ಧಕೋಶ ಹೀಗೆ ಹೇಳುತ್ತದೆ, Vowel. A speech sound in which the mouth is open and the tongue doesn’t is touch the upper part of the mouth, and teeth, two lips doesn’t touch each other. The letters representing such a sound, such as a,e,i,o,u.ಇಂತಹ ಬೇಸಿಕ್ ವಿಚಾರಗಳನ್ನು ತಿಳಿದುಕೊಳ್ಳುವುದು, ಶಬ್ಧಕೋಶವನ್ನು ಬಳಸುವುದು ಹೇಗೆ ಮುಂತಾದುವುಗಳನ್ನು ಕಲಿತುಕೊಳ್ಳುವುದು ಅತಿ ಅವಶ್ಯಕ. ಇನ್ನು ವಿಜ್ಞಾನ ವಿಭಾಗದಲ್ಲಿ, ಜೀವಕೋಶ ಎಂದರೇನು? ಅದರೊಳಗೆ ಏನೇನಿದೆ? ಎಂಬ ವಿಚಾರ ತಿಳಿಯದೇ ಜೀವಿಗಳ ಬಗ್ಗೆ ಅಥವಾ ಜೀವನ ಕ್ರಿಯೆ ಹೇಗೆ ನಡೆಯುತ್ತದೆ? ಮುಂತಾದವುಗಳನ್ನು ಹೇಳಿದರೆ ತಿಳಿಯದು. ಕಾರ್ಬನ್ ಅನ್ನು ’ಅ’ ನೀರನ್ನು H2O ಎಂದು, ಸಾರಜನಕ ’ಓ’ ಎಂದು ಸಂಕೇತಗಳಲ್ಲಿ ಬರೆಯಲಾಗುತ್ತದೆ, ಎಂದು ತಿಳಿಯದ ವಿದಾರ್ಥಿಗಳಿಗೆ 2H+1/2 O2–> H2O ಎಂಬ ಸಮೀಕರಣ ಬರೆದರೆ ಅರ್ಥವಾಗಬಹುದೇ? ಬೆಳಕಿನ ವೇಗ ಸೆಕುಂಡಿಗೆ 3*108 ಎಂದು ತಿಳಿಯದಿದ್ದರೆ ಭೌತಶಾಸ್ತ್ರದ ಉಳಿದ ಸಮಸ್ಯೆಗಳನ್ನು ಬಿಡಿಸಲು ಕಷ್ಟವಾಗುತ್ತದೆ. ಇದರಿಂದ ಕೇವಲ ವಿದಾರ್ಥಿಗಳಿಗಷ್ಟೇ ಅಲ್ಲ, ಅವರಿಗೆ ಈ ವಿಚಾರಗಳನ್ನು ಭೋಧಿಸಬೇಕಾಗಿರುವ ಅಧ್ಯಾಪಕರಿಗೂ ಇದು ಸಂಕೀರ್ಣವಾಗುತ್ತದೆ. ಇಂತಹ ಹತ್ತು ಹಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಯಾವುದು ವಿದಾರ್ಥಿಗಳಿಗೆ ಅಗತ್ಯ ಎಂಬುದನ್ನು ಗಮನಿಸಿ ನಮ್ಮದೇ ಆದ ’Syllabus ಮಾಡಿರುತ್ತೇವೆ ಜೊತೆಗೆ ಈ ವಿಚಾರಗಳನ್ನು Smart class ಗಳ ಮೂಲಕ Team work ಮಾಡಿಸುವುದರ ಮೂಲಕ ಮಾಮೂಲು ತರಗತಿಗಳಂತಲ್ಲದೇ ವಿದಾರ್ಥಿಗಳು ಆಸಕ್ತಿ ಇಂದ ಭಾಗವಹಿಸಬೇಕು, ತರಗತಿಯನ್ನು ಆಸ್ವಾದಿಸಬೇಕು ಎಂಬ ಗುರಿಯನ್ನಿಟ್ಟುಕೊಂಡಿರುತ್ತೇವೆ.
ಈ ತರಗತಿಯಿಂದ ವಿದಾರ್ಥಿಗಳು ತಮ್ಮ ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳುವುದಷ್ಟೇ ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿಗೊಳ್ಳುತ್ತಾರೆ ಎಂಬ ಭರವಸೆ ನಮ್ಮದು. ವಿದಾರ್ಥಿಗಳಲ್ಲಿ ಪ್ರಶ್ನೆಗಳು ಮೂಡುವಂತೆ ಮಾಡಿ ಅದಕ್ಕೆ ಉತ್ತರ ನೀಡುವ ಆಶಯವೇ Answer Summer class. ಈ ವಿನೂತನ ತರಗತಿಯನ್ನು ಪುತ್ತೂರಿನಲ್ಲಿ ದ್ವಿತೀಯ ಬಾರಿಗೆ ಪ್ರಗತಿ ಸ್ಟಡಿ ಸೆಂಟರ್ ಆಯೋಜಿಸಿದ್ದು ಗಣಿತ, ವಿಜ್ಞಾನ ಹಾಗೂ ಇಂಗ್ಲೀಷ್ ವಿಷಯಗಳ ಬಗ್ಗೆ ಏಪ್ರಿಲ್ 21 ರಿಂದ ಮೇ 18 ರವರೆಗೆ ಪ್ರತಿನಿತ್ಯ ಸಮಯ ಬೆಳಗ್ಗೆ 9.30 ರಿಂದ ಸಂಜೆ 3.30ವರೆಗೆ ನಡೆಯಲಿದೆ. ದೂರದ ವಿದಾರ್ಥಿ, ವಿದಾರ್ಥಿನಿಯರಿಗೆ ಸಂಸ್ಥೆಯ ಪ್ರತ್ಯೇಕ ಹಾಸ್ಟೇಲ್ ವ್ಯವಸ್ಥೆಯಿದೆ ಎಂದು ಪ್ರಕಟಣೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಕೆ ಹೇಮಲತಾ ಗೋಕುಲ್ ನಾಥ್ ರವರು ತಿಳಿಸಿರುತ್ತಾರೆ.